Advertisement

ಗಡಿಯಾರ: ಕಾರು-ರಿಕ್ಷಾ ಢಿಕ್ಕಿ

01:14 AM May 26, 2019 | Team Udayavani |

ವಿಟ್ಲ: ಮಾಣಿ ಸಮೀಪದ ಗಡಿಯಾರದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಿಕ್ಷಾಕ್ಕೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ.

Advertisement

ಗಡಿಯಾರ ನಿವಾಸಿ, ಆಪದಾºಂಧವ ಪುತ್ತಾಕ ಅವರು ಗಡಿಯಾರ ಸಮೀಪ ರಸ್ತೆ ಬದಿಯಲ್ಲಿ ತನ್ನ ರಿಕ್ಷಾವನ್ನು ನಿಲ್ಲಿಸಿದ್ದರು. ಈ ಸಂದರ್ಭ ಕಾರು ಢಿಕ್ಕಿ ಹೊಡೆದು ಪುತ್ತಾಕ ಗಂಭೀರ ಗಾಯಗೊಂಡಿದ್ದಾರೆ. ರಿಕ್ಷಾದಲ್ಲಿದ್ದ ಪದ್ಮಾವತಿ ಹಾಗೂ ಕಾವ್ಯಾ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಗಾಯಾಳುಗಳನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಿಟ್ಲ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next