Advertisement

Madikeri ಶಬರಿಮಲೆಯಿಂದ ಬರುತ್ತಿದ್ದಾಗ ಕಾರು ಅಪಘಾತ: ಓರ್ವ ಸಾವು

12:29 AM Dec 28, 2023 | Team Udayavani |

ಮಡಿಕೇರಿ: ಕೊಡಗಿನಿಂದ ಶಬರಿಮಲೆಗೆ ಕಾರಿನಲ್ಲಿ ತೆರಳಿದ್ದ ತಂಡವೊಂದು ಮರಳಿ ಬರುತ್ತಿದ್ದಾಗ ಕೇರಳದ ಅಂಗಮಾಲಿಯ ಪೇರಂಬೂರ್‌ ಬಳಿ ಕಾರು ಮರಕ್ಕೆ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

Advertisement

ಕುಶಾಲನಗರದ ಹಾರಂಗಿ ದೊಡ್ಡತ್ತೂರು ನಿವಾಸಿ ಕುಂಞಿರಾಮ ಅವರ ಪುತ್ರ ಆಟೋ ಚಂದ್ರ ಮೃತಪಟ್ಟವರು. ಕುಶಾಲನಗರದ ಲಿಂಗಂ, ಹರೀಶ್‌, ಸಂತೋಷ್‌ ಗಾಯಗೊಂಡಿದ್ದಾರೆ.

ಅವರನ್ನು ಪೆರಂಬೂರಿನ ರಾಜಗಿರಿ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next