Advertisement

Accident: ಕಾರು ಅಪಘಾತ: ನಿವೃತ್ತ ಸೈನಿಕ ಸಾವು

11:15 PM Sep 17, 2023 | Team Udayavani |

ಶ್ರೀರಂಗಪಟ್ಟಣ: ಅಪರಿಚಿತ ವಾಹನಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ನಿವೃತ್ತ ಸೈನಿಕರೋರ್ವರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ನಗುವನಹಳ್ಳಿ ಗೇಟ್‌ ಬಳಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದೆ.

Advertisement

ಕಿಶೋರ್‌ ಬಾಬು (45) ಮೃತರು. ಇವರು ನೌಕಾದಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು ಎಂದು ತಿಳಿದು ಬಂದಿದೆ. ಮೂಲತಃ ತಮಿಳುನಾಡಿನವರಾಗಿದ್ದ ಇವರು ರವಿವಾರ ಬೆಳಗಿನ ಜಾವ ಆನೇಕಲ್‌ನಿಂದ ಊಟಿ ಕಡೆಗೆ ಕಾರಿನಲ್ಲಿ ಐವರೊಂದಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಮೃತರ ತಮ್ಮ ನವೀನ್‌ ಬಾಬು, ಯುವರಾಜ, ರಮೇಶ, ಧನ್‌ಪಾಲ್‌ ಗಾಯಗೊಂಡಿದ್ದಾರೆ.

ಕಾರಿಗೆ ಬೆಂಕಿ: ಅಪಘಾತಕ್ಕೀಡಾದ ಕಾರಿಗೆ ಬೆಂಕಿ ಸ್ಪರ್ಶವಾಗಿದ್ದು, ಅಗ್ನಿಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next