Advertisement

ವರಂಗ: ಕಾರು ಢಿಕ್ಕಿ ,ಪಾದಚಾರಿ ಸಾವು

01:59 AM Mar 22, 2018 | Team Udayavani |

ಹೆಬ್ರಿ: ಮನೆಗೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಶಿವಪುರ ಗ್ರಾಮದ ಒಂಬತ್ತೂಕ್ಲು ನಿವಾಸಿ ಸದಾನಂದ ಶೆಟ್ಟಿ (52) ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿ  ಸಮೀಪದ ವರಂಗದಲ್ಲಿ ಬುಧವಾರ ಸಂಭವಿಸಿದೆ. ಇವರ ಪತ್ನಿ ಶೀಲಾ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಯಕ್ಷಗಾನ ಕಲಾವಿದ ಅಡೂರು ಗಣೇಶ್‌ ರಾವ್‌ ಅವರು ಮೇಗರವಳ್ಳಿಯಲ್ಲಿ ನಡೆಯುವ ಯಕ್ಷಗಾನದಲ್ಲಿ ಭಾಗವಹಿಸಲು ಆಲ್ಟೋ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ವರಂಗ ಸೊಸೈಟಿ ಬಳಿ ದಂಪತಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಬಿದ್ದ ಸದಾನಂದ ಶೆಟ್ಟಿ ಅವರ ತಲೆಗೆ ಗಂಭೀರ ಗಾಯವಾಗಿ ವಿಪರೀತ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗನಿಗೂ ಇಲ್ಲೇ ಕಾರು ಢಿಕ್ಕಿ ಹೊಡೆದಿತ್ತು! 
ಮೃತ ಸದಾನಂದ ಶೆಟ್ಟಿ ಅವರ ಪುತ್ರ ವರುಣ್‌ ಅವರು ಬೆಂಗಳೂರಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ತಿಂಗಳ ಹಿಂದೆ ಊರಿಗೆ ಬಂದಿದ್ದಾಗ ಅವರಿಗೂ ಇದೇ ಸ್ಥಳದಲ್ಲಿ ಕಾರೊಂದು ಢಿಕ್ಕಿ ಹೊಡೆದಿತ್ತು. ಅವರು ಚಿಕಿತ್ಸೆ ಪಡೆದು ಚೇತರಿಸುತ್ತಿದ್ದ ಸಂದರ್ಭದಲ್ಲೇ ಮತ್ತೂಂದು ದುರಂತ ಸಂಭವಿಸಿದೆ. ಮೃತರ ಮತ್ತೋರ್ವ ಪುತ್ರ ಅಮರ್‌ ಮುಂಬಯಿಯಲ್ಲಿ ಉದ್ಯೋಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next