Advertisement

ಹುಣಸೂರಿನಲ್ಲಿ ಭೀಕರ ಅಪಘಾತ; ಬೆಂಗಳೂರಿನ ನಾಲ್ವರು ನಿವಾಸಿಗಳು ಬಲಿ

07:16 PM Mar 25, 2017 | Team Udayavani |

ಮೈಸೂರು:ಅತಿಯಾದ ವೇಗದಿಂದ ನಿಯಂತ್ರಣ ತಪ್ಪಿ ಫೋರ್ಡ್ ಕಾರು ಪಲ್ಟಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಣಸೂರು ಠಾಣಾ ವ್ಯಾಪ್ತಿಯ ನಲ್ಲೂರುಪಾಲಾ ಬಳಿ ಸಂಭವಿಸಿದೆ.

Advertisement

ಹುಣಸೂರು ತಾಲೂಕು ನಲ್ಲೂರು ಪಾಲಾ ಗ್ರಾಮದ ಬಳಿ ಈ ಭೀಕರ ದುರಂತ ಸಂಭವಿಸಿದ್ದು, ಕಾರಿನಲ್ಲಿದ್ದವರು ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸಿಗಳೆಂದು ಗುರುತಿಸಲಾಗಿದೆ.

ಫೋರ್ಡ್ ಕಾರಿನಲ್ಲಿದ್ದ ರಂಜನ್ ಸಾಲಂಕಿ, ಕಿಶೋರ್ ಯಾದವ್, ಕೌಶಿಕ್ ಯಾದವ್,  ಘೋರ್ಪಡೆ ಮೃತರಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next