Advertisement

ಉಡುಪಿ: ಕುಂಜಿಬೆಟ್ಟು ಬಳಿ ಕಾರು ಪಲ್ಟಿ

11:13 AM Aug 26, 2019 | Team Udayavani |

ಉಡುಪಿ: ಮಣಿಪಾಲ – ಉಡುಪಿ ಮುಖ್ಯ ರಸ್ತೆಯ ಕುಂಜಿಬೆಟ್ಟಿನಲ್ಲಿ ಶಾರದಾ ಕಲ್ಯಾಣ ಮಂಟಪದ ಸಮೀಪ ಕಾರೊಂದು ಚರಂಡಿಗೆ ಉರುಳಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಹೆದ್ದಾರಿ ವಿಸ್ತರಣೆಯ ಕಾಮಗಾರಿಯ ಭಾಗವಾಗಿ ನಿರ್ಮಾಣ ಹಂತದಲ್ಲಿದ್ದ ರಸ್ತೆ ಬದಿಯ ಚರಂಡಿಗೆ ಈ ಕಾರು ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ. ಈ ಕಾರು ಉಡುಪಿ ಕಡೆಯಿಂದ ಮಣಿಪಾಲದ ಕಡೆಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

Advertisement

ಘಟನೆಯ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಇದೀಗ ಕಾರನ್ನು ಚರಂಡಿಯಿಂದ ಮೇಲಕ್ಕೆ ಎತ್ತಲಾಗುತ್ತಿದೆ. ಈ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಅಡ್ಡಿ ಉಂಟಾಗಿಲ್ಲ.



Advertisement

Udayavani is now on Telegram. Click here to join our channel and stay updated with the latest news.

Next