Advertisement
ಬೆಂಗಳೂರು ಮೂಲದ ಅಪ್ಸರ್ ಪಾಷ (52), ಜಾಕೀರ್(26) ಹಾಗೂ ಸೈಯದ್ ಶಬ್ಬೀರ್(45), ಇಸ್ಮಾಯಿಲ್ ಪಾಷ (33), ಸೈಯದ್ ಅಲೀಂ (23), ತಬ್ರೇಜ್ ಪಾಷ (25), ಆಸೀಫ್(30) ಹಾಗೂ ಪ್ರಮುಖ ಆರೋಪಿ ಖಲೀಮ್(35) ಎಂಬುವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಒಳಗಿನವರು ಭಾಗಿ?: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಇವರುಗಳ ಪತ್ತೆಗೆ ತನಿಖೆ ಮುಂದುವರಿದಿದೆ.ಪ್ರಕರಣದಲ್ಲಿ ಒಳಗಿನವರು ಸಹ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆಯೂ ಸಹ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಡಿಸಿಪಿಗಳಾದ ಡಾ.ಎಚ್.ಟಿ.ಶೇಖರ್, ವಿಕ್ರಂ ಅಮಟೆ ಹಾಜರಿದ್ದರು. ಮೊಬೈಲ್ ಕಳ್ಳರ ಬಂಧನ
ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಮೊಬೈಲ್ ಕಳವು ಪ್ರಕರಣಗಳ ಸಂಬಂಧ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಕಡಿಮೆ ಬೆಲೆಗೆ ಮೊಬೈಲ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೈಸೂರಿನ ಮೊಹಮ್ಮದ್ ಕಾಶಿಪ್ ಷರೀಫ್(34), ಮೊಹಮ್ಮದ್ ಶೋಹೇಬ್(29) ಹಾಗೂ ಅಸ್ಮಾ ಬಾನು(25) ಅವರನ್ನು ಬಂಧಿಸಿ, ಇವರಿಂದ 2.5 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 22 ಮೊಬೈಲ್ಗಳನ್ನು ಉದಯಗಿರಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿದ್ದಾರ್ಥನಗರದ ವಿನಯ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿದ ನಜ‚ರ್ಬಾದ್ ಪೊಲೀಸರು ರೆಹಮಾನ್ ಷರೀಪ್(24), ನೌಷಾದ್(19) ಹಾಗೂ ನವೀದ್ ಪಾಷ(21) ಅವರುಗಳನ್ನು ಬಂಧಿಸಿ, 1.12 ಲಕ್ಷ ರೂ. ಮೌಲ್ಯದ 8 ಮೊಬೈಲ್ ಹಾಗೂ 1 ಬೈಕ್ ವಶಕ್ಕೆ ಪಡೆದಿದ್ದಾರೆ. ನಗರದ ಬಿಗ್ಬಜಾರ್ನಲ್ಲಿ ವ್ಯಾಪಾರಕ್ಕೆಂದು ಇಟ್ಟಿದ್ದ ಐ ಪೋನ್ ಕಳವು ಮಾಡಿದ್ದ ಹೇಮಂತ್(26) ಎಂಬಾತನನ್ನು ಲಕ್ಷ್ಮೀಪುರಂ ಪೊಲೀಸರು ಬಂಧಿಸಿದ್ದು, ಈತನಿಂದ 30 ಸಾವಿರ ರೂ. ಮೌಲ್ಯದ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಐಎಂಇಐ ಸಂಖ್ಯೆ ಬದಲು: ವಿವಿಧ ಕಡೆಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಕಳವು ಮಾಡಿದ ಮೊಬೈಲ್ಗಳ ಐಎಂಇಐ ಸಂಖ್ಯೆ ಬದಲಾವಣೆ ಮಾಡಿ ಮಾರಾಟ ಮಾಡುತ್ತಿದ್ದರು. ನಗರದಲ್ಲಿ ಸೈಬರ್ ಕ್ರೈಮ್ ಠಾಣೆ ಆರಂಭಕ್ಕೆ ಈಗಾಗಲೇ ಸರ್ಕಾರದಿಂದ ಒಪ್ಪಿಗೆ ದೊರೆತಿದ್ದು, ಈ ಹಿನ್ನೆಲೆ ಮುಂದಿನ ಒಂದು ತಿಂಗಳಲ್ಲಿ ಸೈಬರ್ ಕ್ರೈಮ್ ಠಾಣೆ ಹಾಗೂ ಎಕನಾಮಿಕ್ ಆ್ಯಂಡ್ ನಾರೊಟಿಕ್ ಠಾಣೆ ಆರಂಭಿಸಲಾಗುವುದು.
-ಸುಬ್ರಹ್ಮಣ್ಯೇಶ್ವರ ರಾವ್, ಪೊಲೀಸ್ ಆಯುಕ್ತ