Advertisement

ಕೊಲೆಗೆ ಯತ್ನಿಸಿದ್ದ ಆರೋಪಿಗಳ ಸೆರೆ

05:14 AM Jun 14, 2020 | Lakshmi GovindaRaj |

ಬೆಂಗಳೂರು: ರೌಡಿಶೀಟರ್‌ ಲೋಕೇಶ್‌ ಎಂಬುವನ ಮೇಲೆ ಮಾರಕಾಸOಉಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಆರು ಮಂದಿ ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಕೋಗಿಲು ಲೇಔಟ್‌ ನಿವಾಸಿ ಸೈಯದ್‌  ನವಾಜ್‌ (22), ಸೈಯದ್‌ ತೋಹಿದ್‌ (27), ಸೈಯದ್‌ (21), ತಬ್ರೇಜ್‌ಬೇಗ್‌ (33), ಅಗ್ರಹಾರ ಲೇಔಟ್‌ನ ಗಣೇಶ್‌ (19) ಹಾಗೂ ಕಾಮಾಕ್ಷಮ್ಮ ಲೇಔಟ್‌ ನಿವಾಸಿ ರಮೇಶ್‌ ಅಲಿಯಾಸ್‌ ಟಾಟಾ (40) ಬಂಧಿತರು.

Advertisement

ಕೊಲೆ ಪ್ರಕರಣದಲ್ಲಿ  ಜೈಲಿನಲ್ಲಿರುವ ಕ್ಯಾಟ್‌ ಮಂಜ ಕುಮ್ಮಕ್ಕು ನೀಡಿದ್ದ ಎಂಬುದು ಆರೋಪಿಗಳ ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು. ರೌಡಿಶೀಟರ್‌ ಲೋಕೇಶ್‌ ಈ ಹಿಂದೆ ಹಲ್ಲೆ, ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ. ನವಾಜ್‌ ಜತೆ  ಗಲಾಟೆ ಮಾಡಿಕೊಂಡಿದ್ದ. ಕುಡಿದ ಅಮಲಿನಲ್ಲಿ ನವಾಜ್‌ಗೆ ಅವಾಚ್ಯವಾಗಿ ನಿಂದಿಸುತ್ತಿದ್ದ. ಈ ವಿಚಾರವನ್ನು ನವಾಜ್‌ ತನ್ನ ಸ್ನೇಹಿತ ರಮೇಶ್‌ಗೆ ತಿಳಿಸಿದ್ದ.

ಬಳಿಕ ನವಾಜ್‌ ಮತ್ತು ರಮೇಶ್‌ ಸೇರಿ ಜೈಲಿನಲ್ಲಿರುವ ಕ್ಯಾಟ್‌ ಮಂಜನನ್ನು ಸಂಪರ್ಕಿಸಿದ್ದರು. ಲೋಕೇಶ್‌ ಗಲಾಟೆ ವಿಚಾರ ತಿಳಿಸಿದ್ದರು. ಲೋಕೇಶ್‌ ಹತ್ಯೆಗೆ ಸಂಚು ರೂಪಿಸಿದ್ದು, ರಮೇಶ್‌ ತನ್ನ ಸಹಚರರನ್ನು ನವಾಜ್‌ ಜತೆಗೆ ಕಳುಹಿಸಿದ್ದ. ಲೋಕೇಶ್‌ ಜೂ. 6ರಂದು ಮಧ್ಯಾಹ್ನ 1 ಗಂಟೆಯಲ್ಲಿ ಫ್ಯಾಕ್ಟರಿಯೊಂದರ  ಬಳಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳು ಮಾರಕಾಸOಉಗಳಿಂದ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next