Advertisement

ಜೀವ ಬೆದರಿಕೆ ಕಾರಣ ತನಿಖೆಗೆ ದಿಲ್ಲಿಗೆ ಬರಲಾರೆ: NIAಗೆ ಉಮರ್‌ ಫಾರೂಕ್

09:52 AM Mar 11, 2019 | Team Udayavani |

ಶ್ರೀನಗರ : ತನಗೆ ಜೀವ ಬೆದರಿಕೆ ಇರುವ ಕಾರಣ ತನ್ನನ್ನು ದಿಲ್ಲಿಯ ಬದಲು ಇಲ್ಲಿಯೇ ಪ್ರಶ್ನಿಸಬೇಕು ಎಂದು ಸೌಮ್ಯವಾದಿ ಹುರಿಯತ್‌ ಕಾನ್ಫರೆನ್ಸ್‌ ಅಧ್ಯಕ್ಷ ಮೀರ್‌ವೆಜ್‌ ಉಮರ್‌ ಫಾರೂಕ್‌ ಅವರು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವನ್ನು ಕೋರಿದ್ದಾರೆ.

Advertisement

ಕಾಶ್ಮೀರದಲ್ಲಿ ಹವಾಲಾ ಮೂಲಕ ಉಗ್ರರಿಗೆ ಹಣ ಪೂರೈಸಲಾಗುತ್ತಿರುವ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. 

ಕಳೆದ ತಿಂಗಳಲ್ಲಿ ಎನ್‌ಐಎ ಜಮ್ಮು ಕಾಶ್ಮೀರದಲ್ಲಿ ಮೀರ್‌ವೆಜ್‌ ಸಹಿತ ಹಲವು ಪ್ರತ್ಯೇಕತಾವಾದಿಗಳ ಮೇಲೆ ಸರಣಿ ದಾಳಿ ನಡೆಸಿತ್ತು. ಆ ಪ್ರಕಾರ ದಿಲ್ಲಿಗೆ ಬಂದು ತನಿಖೆಗೆ ಹಾಜರಾಗುವಂತೆ ಎನ್‌ಐಎ ಮೀರ್‌ವೆಜ್‌ಗೆ ಆದೇಶಿಸಿತ್ತು. 

ದಿಲ್ಲಿಗೆ ಬಂದು ತನಿಖೆಗೆ ಹಾಜರಾಗುವಂತೆ ಕಳೆದ ಮಾರ್ಚ್‌ 6ರಂದು ಎನ್‌ಐಎ ಬರೆದಿದ್ದ ಪತ್ರಕ್ಕೆ ಉತ್ತರವಾಗಿ ಮೀರ್‌ವೆಜ್‌ ಅವರ ವಕೀಲ, ಇಜಾಜ್‌ ಅಹ್ಮದ್‌ ಧಾರ್‌ ಅವರು, ದಿಲ್ಲಿಯಲ್ಲಿ ನನ್ನ ಕಕ್ಷಿದಾರರ ಭದ್ರತೆಗೆ ಬೆದರಿಕೆ ಇದೆ; ಹಾಗಾಗಿ ಅವರಿಗೆ ದಿಲ್ಲಿಗೆ ಬರುವುದು ಅಪಾಯಕಾರಿಯಾಗಿದೆ; ಆದುದರಿಂದ ಶ್ರೀನಗರದಲ್ಲೇ ತನಿಖೆ ನಡೆಸಬೇಕು ಎಂಬುದು ಅವರ ಕೋರಿಕೆಯಾಗಿದೆ’ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next