Advertisement

ಠೇವಣಿ ಹಣ ನಾಣ್ಯಗಳಲ್ಲೇ ಭರ್ತಿ ಮಾಡಿದ ಅಭ್ಯರ್ಥಿ!

02:57 AM Apr 04, 2019 | Sriram |

ಶಿವಮೊಗ್ಗ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಲಿಕಾಪ್ಟರ್‌ ಮೂಲಕ ಆಗಮಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದ ಪಕ್ಷೇತರ ಅಭ್ಯರ್ಥಿ ವಿನಯ್‌ ರಾಜಾವತ್‌ ಈ ಬಾರಿಯೂ ವಿಭಿನ್ನವಾಗಿ ನಾಮಪತ್ರ ಸಲ್ಲಿಸಿ ಶಿವಮೊಗ್ಗ ಲೋಕಸಭಾ ಕಣಕ್ಕಿಳಿದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಹಣವನ್ನು ನಾಣ್ಯಗಳಲ್ಲಿ ನೀಡಿದ್ದಾರೆ.

Advertisement

ಬುಧವಾರ ನಾಮಪತ್ರ ಸಲ್ಲಿಸಿದ ಅವರು ಠೇವಣಿ ಹಣವನ್ನು ಚೀಲದಲ್ಲಿ ತಂದಿದ್ದು ವಿಶೇಷ. ಪ್ರತಿ ಬಾರಿ ವಿಶೇಷವಾಗಿರಬೇಕೆಂದು ಬಯಸುವ ಅವರು ಠೇವಣಿ ಹಣವನ್ನು 1ರೂ, 2ರೂ. ನಾಣ್ಯಗಳಲ್ಲಿ ಭರ್ತಿ ಮಾಡಿದ್ದಾರೆ. ಜಿಲ್ಲಾ ಧಿಕಾರಿ ಕಚೇರಿ ಬಳಿ ಚೀಲ ಹೊತ್ತುಕೊಂಡು ಬರುತ್ತಿದ್ದ ಅಭ್ಯರ್ಥಿಯನ್ನು ಕಂಡ ಪೊಲೀಸರು ಮೊದಲು ಹೌಹಾರಿದ್ದಾರೆ. ನಂತರ ಚೀಲದಲ್ಲಿ ನಾಣ್ಯಗಳಿರುವುದನ್ನು ಪರಿಶೀಲಿಸಿ ಒಳಬಿಟ್ಟಿದ್ದಾರೆ. ಹಣದ ಚೀಲ ಬರೋಬ್ಬರಿ 20 ಕೆಜಿ ತೂಗುತ್ತಿತ್ತು. ನಾಮಪತ್ರ ಸಲ್ಲಿಸಿದ ನಂತರ ಈ ಚಿಲವನ್ನು ಠೇವಣಿ ಹಣವಾಗಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next