Advertisement

ಮುಸ್ಲಿಮರ ಒಬಿಸಿ ಮಾನ್ಯತೆ ರದ್ದು ಮಾಡಿ: ಪ್ರವೀಣ್‌ ತೊಗಾಡಿಯಾ

09:35 AM Jul 04, 2018 | |

ಜೈಪುರ: ಮುಸ್ಲಿಂ ಸಮುದಾಯಕ್ಕೆ ನೀಡಲಾಗಿರುವ “ಇತರೆ ಹಿಂದುಳಿದ ವರ್ಗ’ (ಒಬಿಸಿ) ಮಾನ್ಯತೆ ಯನ್ನು ರದ್ದುಗೊಳಿಸಬೇಕು ಹಾಗೂ ಏರುಗತಿಯಲ್ಲಿ ಸಾಗುತ್ತಿರುವ ಅವರ ಜನಸಂಖ್ಯೆಯನ್ನು ನಿಯಂತ್ರಿ ಸಲು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್‌ನ ಮಾಜಿ ನಾಯಕ ಹಾಗೂ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಂತಾರಾಷ್ಟ್ರೀಯ ಹಿಂದೂ ಪರಿಷತ್‌ ಮುಖ್ಯಸ್ಥ ಪ್ರವೀಣ್‌ ತೊಗಾಡಿಯಾ ಆಗ್ರ ಹಿಸಿದ್ದಾರೆ. 

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಸ್ಲಿಮರಿಗೆ ಎರಡು ಮಕ್ಕಳು ಸಾಕು ಎಂಬ ನಿಯಮ ಜಾರಿಗೊಳಿಸುವ ಮೂಲಕ ಅವರ ಜನಸಂಖ್ಯೆಯ ವೃದ್ಧಿಗೆ ಕಡಿವಾಣ ಹಾಕಬೇಕು” ಎಂದರು.

ಅಷ್ಟೇ ಅಲ್ಲದೆ, ಜನರಿಂದ ಸಂಗ್ರಹವಾಗುತ್ತಿರುವ ತೆರಿಗೆ ಹಣ ಕೇವಲ ಅವರ (ಮುಸ್ಲಿಮರ) ಏಳ್ಗೆ ಗಾಗಿಯೇ ಬಳಸುವುದು ನಿಲ್ಲಬೇಕು. ಆ ಹಣ, ಸಮಾಜದ ಎಲ್ಲಾ ಬಡವರ, ಸರ್ಕಾರದ ಸಹಾಯದ ಅವಶ್ಯಕತೆ ಇರುವವರಿಗೆ ಬಳಕೆಯಾಗಬೇಕು” ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next