Advertisement

ಕೆನರಾ ಬ್ಯಾಂಕ್‌ ಸಿದ್ದಾಪುರ ಶಾಖೆ: ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ

03:50 AM Jul 16, 2017 | Team Udayavani |

ಸಿದ್ದಾಪುರ: ಕೆನರಾ ಬ್ಯಾಂಕು ಸಿದ್ದಾಪುರ ಶಾಖೆ ವ್ಯವಹಾರದಲ್ಲಿ ಅಖೀಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಉಳಿತಾಯ ಖಾತೆ, ಚಾಲ್ತಿ ಖಾತೆ, ನಿರಖು ಠೇವಣಿ, ಗೃಹ ಸಾಲ, ವಾಹನ ಸಾಲದ ವ್ಯವಹಾರದಲ್ಲಿ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಸಿದ್ದಾಪುರ ಶಾಖೆಯ ಶಾಖಾ ವ್ಯವಸ್ಥಾಪಕ ರತ್ನಾಕರ ಗಾಣಿಗ ಅವರನ್ನು  ಬೆಂಗಳೂರಿನ ಕೆನರಾ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಅಖೀಲ ಭಾರತ ಮಟ್ಟದ ಗುರುತಿಸುವಿಕೆ ಕಾರ್ಯಕ್ರಮದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.

Advertisement

ಕೆನರಾ ಬ್ಯಾಂಕ್‌ ಸಿದ್ದಾಪುರ ಶಾಖೆ ಪ್ರಾರಂಭಗೊಂಡು ಕೇವಲ 18 ತಿಂಗಳುಗಳಲ್ಲಿ ಅಖೀಲ ಭಾರತ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಸಾಧನೆ ಮಾಡಿದ  ಶಾಖಾ ವ್ಯವಸ್ಥಾಪಕ ರತ್ನಾಕರ ಗಾಣಿಗ ಅವರ ಸಾಧನೆಯನ್ನು ಅತಿಥಿಗಳು ಶ್ಲಾಘಿಸಿದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಕೇಶ್‌ ಶರ್ಮ, ಇಡಿ ಭಾರತಿ, ಜನರಲ್‌ ಮ್ಯಾನೇಜರ್‌ ಎಸ್‌.ಎಸ್‌. ಶರ್ಮ, ಸಹಾಯಕ ಜನರಲ್‌ ಮ್ಯಾನೇಜರ್‌ ಎಸ್‌.ಟಿ. ರಾಮಚಂದ್ರ, ವೃತ್ತ ಕಾರ್ಯಾಲಯ, ಕ್ಷೇತ್ರ ಕಾರ್ಯಾಲಯ ಹಾಗೂ ಶಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next