Advertisement

ಇವರ ಸೇವೆ ಮರೆಯಲು ಸಾಧ್ಯವೇ?

06:31 PM Apr 06, 2020 | mahesh |

ಮಣಿಪಾಲ: ಕೋವಿಡ್‌- 19 ವಿರುದ್ಧ ಹೋರಾಡಲು ವಿಶ್ವದ ಪ್ರತಿಯೋರ್ವ ಪ್ರಜೆಯೂ ಒಂದಲ್ಲ ಒಂದು ರೀತಿಯಲ್ಲಿ ಶ್ರಮಿಸುತ್ತಿದ್ದಾನೆ. ಆ ಪೈಕಿ ಸಿಂಹ ಪಾಲು ಯಾರದು ಎಂಬ ಪ್ರಶ್ನೆ ಮೂಡಿದರೇ ವೈದ್ಯಕೀಯ ಕ್ಷೇತ್ರ ಎಂಬ ಉದ್ಗಾರ ಕೇಳಿ ಬರುತ್ತದೆ. ಇದೀಗ ಈ ಮಾತಿಗೆ ಮತ್ತಷ್ಟು ಪುಷ್ಟಿ ಎಂಬುವಂತೆ ಇವರ ಸೇವೆಯನ್ನು ತಿಳಿಯಬೇಕು. ತುಂಬು ಗರ್ಭಿಣಿಯಾಗಿರುವ ನರ್ಸ್‌ ಒಬ್ಬರು 250 ಕಿ.ಮೀ ಪ್ರಯಾಣಿಸಿ ಕೋವಿಡ್‌- 19 ಸೋಂಕು ಪೀಡಿತರ ಸೇವೆ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

Advertisement

ತಮಿಳುನಾಡಿನ ತಿರುಚ್ಚಿಯ ಎಸ್‌.ವಿನೋದಿನಿ ಎಂಬ ನರ್ಸ್‌ ಕೋವಿಡ್‌- 19 ಸೋಂಕಿತರ ಶುಶ್ರೂಷೆಯಲ್ಲಿ ಕಾರ್ಯ ನಿರತರಾಗಿದ್ದು, ನಿತ್ಯವೂ ತಿರುಚ್ಚಿಯಿಂದ ರಾಮನಾಥಪುರಂಗೆ 250 ಕಿ.ಮೀ ಪ್ರಯಾಣಿಸಿ ಕೋವಿಡ್‌- 19 ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಕರಿಸುತ್ತಿದ್ದಾರೆ.

ಈ ಮುನ್ನ ತಿರುಚ್ಚಿಯ ಖಾಸಗಿ ಆಸ್ಪತ್ರೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಈಕೆಗೆ ರಾಮನಾಥ ಪುರಂನ ಆರೋಗ್ಯ ಸೇವೆಗಳ ಜಂಟಿ ನಿರ್ದೇಶಕ(ಜೆಡಿ)ರಿಂದ ಇಲ್ಲಿನ ಪ್ರಾಥಮಿಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶ ಬಂದಿತು. ಕೋವಿಡ್-19 ತೀವ್ರತೆ ಹೆಚ್ಚುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಅದಕ್ಕೆ ಯಾವುದೇ ಮಾರುತ್ತರ ನೀಡದೇ ವಿನೋದಿನಿ ಎ. 1 ರಿಂದಲೇ ವಿನೋದಿನಿ ಕರ್ತವ್ಯಕ್ಕೆ ಹಾಜರಾಗಿ ಚಿಕಿತ್ಸೆಯಲ್ಲಿ ಭಾಗಿಯಾಗಿದ್ದಾರೆ. ಸಣ್ಣ ಸಣ್ಣ ನೆವಕ್ಕೂ ಕೆಲಸದಿಂದ ತಪ್ಪಿಸಿಕೊಂಡು ಆರಾಮಾಗಿ ಇರಲು ಪ್ರಯತ್ನಿಸುವವರೇ ಹೆಚ್ಚಿರುವ ದಿನಗಳಲ್ಲಿ ಎಲ್ಲರಿಗೂ ಮಾದರಿಯಾಗುವ ಹಾಗೆ ವರ್ತಿಸಿದ ದಾದಿಯ ಕುರಿತು ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಈ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next