Advertisement

ನೀರವ್‌ ಮೋದಿ ವಿದೇಶಕ್ಕೆ ಪಲಾಯನ ಮಾಡಿದ್ದು ಹೇಗೆ ? ಕೇಜ್ರಿ

03:29 PM Feb 15, 2018 | udayavani editorial |

ಹೊಸದಿಲ್ಲಿ : ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 280 ಕೋಟಿ ರೂ. ವಂಚಿಸಿ ಈಗ ಜಾರಿ ನಿರ್ದೇಶನಾಲಯದ ವಿಚಕ್ಷಣೆಯಲ್ಲಿರುವ 46ರ ಹರೆಯದ ಬಿಲಿಯಾಧಿಪತಿ ಜ್ಯುವೆಲ್ಲರ್‌ ನೀರವ್‌ ಮೋದಿ, ಬಿಜೆಪಿಯ ಕೃಪೆ ಇಲ್ಲದೆ, ವಿಜಯ್‌ ಮಲ್ಯ ಅವರಂತೆ ಸುರಕ್ಷಿತವಾಗಿ  ವಿದೇಶಕ್ಕೆ ಪರಾರಿಯಾಗಲು ಸಾಧ್ಯವೇ ? ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ. 

Advertisement

ಜಾರಿ ನಿರ್ದೇಶನಾಲಯ ಇಂದು ಗುರುವಾರ ನೀರವ್‌ ಮೋದಿ ಅವರ ಮುಂಬಯಿ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಹಿನ್ನೆಲಯಲ್ಲಿ ಕೇಜ್ರಿವಾಲ್‌ ಟ್ವಿಟರ್‌ನಲ್ಲಿ “ಬಿಜೆಪಿ ಕೃಪೆ’ ಯನ್ನು ಕೊಂಡಾಡಿದ್ದಾರೆ.

ಪಿಎನ್‌ಬಿ ವಂಚನೆ ಹಗರಣ ಬಹಿರಂಗಕ್ಕೆ ಬರುವ ಎಷ್ಟೋ ಮೊದಲು, ಅಂದರೆ ಜನವರಿ ಆರಂಭದಲ್ಲೇ ನೀರವ್‌ ಮೋದಿ ವಿದೇಶಕ್ಕೆ ಪಲಾಯನ ಮಾಡಿರುವುದು ತನಿಖಾ ಸಂಸ್ಥೆಗಳಿಗೆ ಯಕ್ಷಪ್ರಶ್ನೆಯಾಗಿದ್ದು ನೀರವ್‌ ಮೋದಿಗಾಗಿ ಈಗ ಲುಕ್‌ ಔಟ್‌ ನೊಟೀಸ್‌ ಜಾರಿ ಮಾಡಲಾಗಿರುವುದಾಗಿ ತಿಳಿದುಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next