Advertisement

ಮರಳು ದಂಧೆ ವಿರುದ್ಧ ಕ್ರಮಕ್ಕೆ ಆಗ್ರಹ

04:33 PM Feb 19, 2022 | Team Udayavani |

ಲಿಂಗಸುಗೂರು: ಅಕ್ರಮ ಮರಳು ದಂಧೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ತಾಲೂಕು ಘಟಕದ ಪದಾ ಧಿಕಾರಿಗಳು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ತಾಲೂಕಿನ ಗುರುಗುಂಟಾ ಸುತ್ತಮುತ್ತಲಿನ ಹಳ್ಳ, ನದಿಗಳಿಂದ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ಸಾಗಿದೆ. ಒಂದು ರಾಯಲಟಿ ಪಡೆದು ನಾಲ್ಕೈದು ವಾಹನಗಳಲ್ಲಿ ಮರಳು ಸಾಗಾಟ ಮಾಡುತ್ತಿದ್ದಾರೆ. ಮರಳು ತುಂಬಿದ ಲಾರಿಗಳು ಅತಿ ವೇಗದಿಂದ ಚಾಲನೆ ಮಾಡುತ್ತಿದ್ದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಮರಳು ತುಂಬಿದ ಮೇಲೆ ಮರಳು ಗಾಳಿಗೆ ಹಾರಾಡುತ್ತಿದ್ದರಿಂದ ಸಾರ್ವಜನಿಕರು, ಬೈಕ್‌ ಸವಾರರ ಕಣ್ಣಲ್ಲಿ ಮರಳು ಬಿದ್ದು ಅಪಘಾತಗಳಿಗೆ ಕಾರಣವಾಗಿದೆ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಂಘಟನೆ ತಾಲೂಕು ಅಧ್ಯಕ್ಷ ಶರಣೋಜಿ ಪವಾರ, ಶಿವು ಕೆಂಪು, ಆದಪ್ಪ ನಾಯಕ, ಮಹಿಬೂಬು ಸಾಬ, ಸೈಯದ್‌ ಸಾಹೇಬ ಹುಸೇನ್‌ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next