Advertisement

Puttur ಮರದ ಮೇಲೆ ಕರುವಿನ ಕಳೇಬರ ಪತ್ತೆ! ಚಿರತೆಯ ಕೃತ್ಯವೆಂಬ ಶಂಕೆ

01:14 AM Oct 08, 2023 | Team Udayavani |

ಪುತ್ತೂರು: ಕೆಯ್ಯೂರು ಗ್ರಾಮದ ಕಣಿಯಾರುಮಲೆಯ ರಕ್ಷಿತಾರಣ್ಯದ ಬಳಿಯ ಆರ್ತ್ಯಡ್ಕದ ರಬ್ಬರ್‌ ತೋಟದ ಮರದ ಕೊಂಬೆ ನಡುವೆ ಹಸುವಿನ ಕರುವೊಂದರ ಕಳೇಬರ ಪತ್ತೆಯಾಗಿದ್ದು ಚಿರತೆಯು ಅದನ್ನು ಮರದ ಮೇಲಕ್ಕೆ ಎಳೆದೊಯ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Advertisement

ಆದರೆ ಅರಣ್ಯ ಇಲಾಖೆ ಇದನ್ನು ದೃಢಪಡಿಸಿಲ್ಲ. ದೇಹದ ಕೆಲ ಭಾಗವನ್ನು ತಿಂದು ಹಾಕಿರುವುದು ಕಂಡು ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಲೂಕಿನ ಕಣಿಯಾರುಮಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಡುಪ್ರಾಣಿಗಳ ಕಾಟ ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next