Advertisement

ಪಣಜಿ: ಡಿಸೆಂಬರ್ ಅಂತ್ಯದೊಳಗೆ ಕೇಬಲ್ ಸೇತುವೆ ನಾಗರಿಕರ ಪ್ರಯಾಣಕ್ಕೆ ಮುಕ್ತ

05:34 PM Dec 15, 2022 | Team Udayavani |

ಪಣಜಿ: ಜುವಾರಿ ನದಿಗೆ ಹೊಸದಾಗಿ ನಿರ್ಮಿಸಲಾಗಿರುವ ಸೇತುವೆಯನ್ನು ಡಿಸೆಂಬರ್ ಅಂತ್ಯದೊಳಗೆ ನಾಗರಿಕರ ಪ್ರಯಾಣಕ್ಕೆ ಮುಕ್ತಗೊಳಿಸಲಾಗುವುದು ಎಂದು ರಾಜ್ಯ ಲೋಕೋಪಯೋಗಿ ಸಚಿವ ನೀಲೇಶ್ ಕಬ್ರಾಲ್ ತಿಳಿಸಿದ್ದಾರೆ. ಸರಿಯಾದ ಗುಣಮಟ್ಟದ ಪರಿಶೀಲನೆ ನಡೆಯುತ್ತಿರುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಡಿಸೆಂಬರ್ ಅಂತ್ಯದೊಳಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಸಚಿವ ಕಬ್ರಾಲ್ ಮಾಹಿತಿ ನೀಡಿದ್ದಾರೆ.

Advertisement

ಈ ಕುರಿತು ಪಣಜಿಯಲ್ಲಿ ಸುದ್ಧಿಗಾರರಿಗೆ ಮಾಹಿತಿ ನೀಡಿದ ಅವರು-  ಜುವಾರಿ ನದಿಗೆ ನೂತನವಾಗಿ ನಿರ್ಮಿಸಿರುವ ಕೇಬಲ್ ಸೇತುವೆಯನ್ನು ಡಿಸೆಂಬರ್ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು, ಈ ಸೇತುವೆಯ ಮೇಲಿನ ವಾಹನ ಸಂಚಾರ ಆರಂಭಗೊಂಡ  ನಂತರ ಹಳೆ ಸೇತುವೆಯ ಮೇಲೆ ಸಂಚಾರ ಹೊರೆ ಕಡಿಮೆಯಾಗಬಹುದು. ಇದಲ್ಲದೇ ಈ ಹೆದ್ದಾರಿಯಲ್ಲಿ ಸಂಚಾರವೂ ಸುಗಮವಾಗಲಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಸಚಿವ ನೀಲೇಶ್ ಕಾಬ್ರಾಲ್ ವಿಶ್ವಾಸ ವ್ಯಕ್ತಪಡಿಸಿದರು.

ಸೇತುವೆಯ ಮೇಲೆ ಭಾರ ಹೇರುವಿಕೆ  ಮತ್ತಿತರ ಪರೀಕ್ಷೆಗಳನ್ನು ನಡೆಸಲಾಗುವುದು. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಸೇತುವೆ ರಾಜ್ಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಸೇತುವೆ ಯಾವಾಗ ಸಂಚಾರಕ್ಕೆ ಮುಕ್ತವಾಗಲಿದೆ ಎಂಬ ಕುತೂಹಲ ಅನೇಕರಲ್ಲಿತ್ತು. ಡಿಸೆಂಬರ್ ವೇಳೆಗೆ ಸೇತುವೆ ವಾಹನ ಸವಾರರಿಗೆ ಮುಕ್ತವಾಗಲಿದ್ದು, ಗೋಮಾಂತಕಿಯರ ಕಾಯುವಿಕೆಗೆ ಈಗ ತೆರೆ ಬೀಳಲಿದೆ ಎಂದು ಸಚಿವ ಕಾಬ್ರಾಲ್ ನುಡಿದರು.

ಇದನ್ನೂ ಓದಿ: 2023ರ ಏಕದಿನ ವಿಶ್ವಕಪ್ ಗೆ ಭಾರತ ತಂಡ ಹೇಗಿರಬೇಕು? ಇಲ್ಲಿದೆ ಒಂದು ಅವಲೋಕನ

Advertisement

Udayavani is now on Telegram. Click here to join our channel and stay updated with the latest news.

Next