Advertisement

ಸಂಪುಟ ಗಾತ್ರ ಹೈಕಮಾಂಡ್‌ ನಿರ್ಧಾರ

11:10 PM Feb 05, 2020 | Lakshmi GovindaRaj |

ಕಲಬುರಗಿ: ಸಚಿವ ಸಂಪುಟ ವಿಸ್ತರಣೆಯಲ್ಲಿ ಎಷ್ಟು ಸ್ಥಾನಗಳು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಅಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಗುರುವಾರ ಸಂಪುಟ ವಿಸ್ತರಣೆಯಾಗು ವುದು ನಿಶ್ಚಿತ. ರಾಜ್ಯದ ಸವಾಂìಗೀಣ ಅಭಿವೃದ್ಧಿಗೆ ಮತ್ತು ದೂರದೃಷ್ಟಿ ಹಿನ್ನೆಲೆಯಲ್ಲಿ ರೈತ ಹಾಗೂ ಮಹಿಳಾ ಪರ ಆಯವ್ಯಯ ವನ್ನು ಮಾ.5ರಂದು ಮಂಡಿಸಲಿದ್ದೇನೆ ಎಂದರು.

Advertisement

ವರಿಷ್ಠರೇ ಹೇಳಬೇಕು
ಬೆಂಗಳೂರು: ಸಂಪುಟದಲ್ಲಿ ನಾನು ಇರುತ್ತೇನಾ ಇಲ್ಲವಾ ಎಂಬುದರ ಬಗ್ಗೆ ವರಿಷ್ಠರೇ ಹೇಳಬೇಕು ಎಂದು ಶಾಸಕ ಮಹೇಶ್‌ ಕುಮಟಳ್ಳಿ ಹೇಳಿದ್ದಾರೆ. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ 11 ಜನರನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸ ಇದೆ. ನಾನೂ, ಶ್ರೀಮಂತ ಪಾಟೀಲ್‌ ಇಬ್ಬರೂ ಲಕ್ಷ್ಮಣ ಸವದಿ ಅವರ ಜತೆಗಿದ್ದೇವೆ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next