Advertisement

ರಾಜ್ಯದಲ್ಲಿ ‌ಸಂಪುಟ ಪುನಾರಚನೆ ಇಲ್ಲ: ಸಚಿವ ಆರ್. ಅಶೋಕ್ ಹೇಳಿಕೆ

10:02 AM Dec 12, 2019 | Team Udayavani |

ಬೆಂಗಳೂರು: ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಬಿಜೆಪಿ ಸಂಪುಟಕ್ಕೆ ಇನ್ನಷ್ಟು ಶಾಸಕರನ್ನು ಸೇರಿಸಲು ತಯಾರಿ ನಡೆಸಿದೆ. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದು, ‌ಸಂಪುಟ ಪುನಾರಚನೆ ಇಲ್ಲ. ಸಂಪುಟ ವಿಸ್ತರಣೆ ಮಾತ್ರ ಎಂದಿದ್ದಾರೆ.

Advertisement

ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಸಂಪುಟ ಪುನಾರಚನೆ ಇಲ್ಲ. ಸಂಪುಟ ವಿಸ್ತರಣೆ ಮಾತ್ರ ಮಾಡಲಾಗುವುದು. ಹಾಲಿ ಇರುವ ಎಲ್ಲಾ ಸಚಿವರ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ. ಹೆಚ್ಚುವರಿ ಯಾಗಿರುವ ಖಾತೆಗಳನ್ನು ಮಾತ್ರ ಹೊಸಬರಿಗೆ ನೀಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಯಾವ ಯಾವ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಪ್ರಚಾರಕ್ಕೆ ಹೋಗಿದ್ದರೋ ಅಲ್ಲಿ ಏನು ಭರವಸೆ ಕೊಟ್ಟಿದ್ದರೋ ಅದನ್ನು‌ಉಳಿಸಿಕೊಳ್ಳುತ್ತಾರೆ. ಉಪ ಮುಖ್ಯಮಂತ್ರಿ ಹುದ್ದೆ ರದ್ದುಗೊಳಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next