Advertisement

ಮಳೆಗಾಲದ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ ಕೇಂದ್ರ ಸರ್ಕಾರ 

02:29 PM Jul 04, 2018 | Team Udayavani |

ಹೊಸದಿಲ್ಲಿ : 2019 ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರದ ಎನ್‌ಡಿಎ ಸರ್ಕಾರ ಮುಂಗಾರಿನ  14 ಬೆಲೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಿದೆ. ಈ ಮೂಲಕ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿದ್ದ, ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಧಾವಿಸಿದೆ. 

Advertisement

ಪ್ರತಿ ಕ್ವಿಂಟಲ್‌ ಭತ್ತಕ್ಕೆ ಕನಿಷ್ಠ 200 ರೂ. ಬೆಂಬಲ  ಬೆಲೆ ಘೋಷಿಸಲಾಗಿದ್ದು,ಕಳೆದ ವರ್ಷ 1,550 ರೂಪಾಯಿ ಇತ್ತು. ಈಗ 1,750 ರೂಪಾಯಿ ಆಗಿದೆ. 12.9 % ಹೆಚ್ಚಳ ಮಾಡಲಾಗಿದೆ. ಗರಿಷ್ಠ ಬೆಂಬಲ ಬೆಲೆಯನ್ನು ರಾಗಿಗೇ ಘೋಷಿಸಲಾಗಿದೆ. 

 ರಾಗಿಗೆ ಪ್ರತಿ ಕ್ವಿಂಟಲ್‌ಗೆ 2,897 ರೂ ಬೆಂಬಲ ಬೆಲೆ ಘೋಷಿಸಲಾಗಿದ್ದು ಶೇಕಡಾ 50 ರಷ್ಟು ಬೆಂಬಲ ಬೆಲೆ ನೀಡಲಾಗಿದ್ದು, ಹಿಂದೆ 1, 900 ರೂಪಾಯಿ ಇತ್ತು.

ಹೈಬ್ರಿಡ್‌ ಜೋಳಕ್ಕೆ  ಕ್ವಿಂಟಾಲ್‌ಗೆ  2,430 ಆಗಿದ್ದು, ಹಿಂದೆ  1, 700 ಇತ್ತು , 40 % ಹೆಚ್ಚಳ ಮಾಡಲಾಗಿದೆ. 

ಸೂರ್ಯ ಕಾಂತಿ ಗೆ ಕ್ವಿಂಟಾಲ್‌ಗೆ 5,388 ಬೆಂಬಲ ಬೆಲೆ ಘೋಷಿಸಲಾಗಿದ್ದು, ಹಿಂದೆ 4,100 ಇತ್ತು 31.4 % ಹೆಚ್ಚಳ ಮಾಡಲಾಗಿದೆ. 

Advertisement

ತೊಗರಿ 5,675 ರೂಪಾಯಿ ಬೆಂಬಲ ಬೆಲೆ ಘೋಷಿಸಲಾಗಿದ್ದು, ಹಿಂದೆ  5,450 ರೂಪಾಯಿ ಇತ್ತು. 

ಉದ್ದು ಕ್ವಿಂಟಾಲ್‌ಗೆ 5,600 ರೂ ಘೋಷಿಸಲಾಗಿದ್ದು, ಹಿಂದೆ 5,400 ರೂಪಾಯಿ ಇತ್ತು.

ಹತ್ತಿ (ಮದ್ಯಮ) 4,020 ರೂ ಇತ್ತು, ಈಗ 5, 150 ಆಗಿದೆ. 

ಹೆಸರು ಬೇಳೆ ಕ್ವಿಂಟಾಲ್‌ಗೆ 6,975 ರೂಪಾಯಿ ಘೋಷಿಸಲಾಗಿದ್ದು , ಮೊದಲು 5,575 ರೂಪಾಯಿ ಇತ್ತು.

ಸೋಯಾಬೀನ್‌ 3999 ರೂ ಬೆಂಬಲ ಬೆಲೆ ಘೋಷಿಸಲಾಗಿದೆ. 

ನೆಲಗಡಲೆ 4, 890 ರೂ ಘೋಷಿಸಲಾಗಿದ್ದು, ಹಿಂದೆ 4,550 ರೂಪಾಯಿ ಇತ್ತು 

ಮುಸುಕಿನ ಜೋಳ, ಎಳ್ಳಿಗೂ ಬೆಂಬಲ ಬೆಲೆ ಘೋಷಿಸಲಾಗಿದೆ.

ಬುಧವಾರ ನಡೆದ ಆರ್ಥಿಕ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ (ಸಿಸಿಇಎ) ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.  2 ವಾರಗಳಲ್ಲಿ ಕಬ್ಬಿನ ಬೆಳೆಗೂ ಬೆಂಬಲ ಬೆಲೆ ಘೋಷಿಸುವುದಾಗಿ ಸರ್ಕಾರ ಹೇಳಿದೆ. 

ಸಿಸಿಇಎ ಸಭೆಯ ಬಳಿಕ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಮತ್ತು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. 

ಕೇಂದ್ರ ದ ಈ ನಿರ್ಧಾರದಿಂದ ಬೊಕ್ಕಸಕ್ಕೆ  15,000 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next