Advertisement

ಅನುದಾನ ಕೊಟ್ಟಿಲ್ಲಅಂದ್ರೆ ರಾಜೀನಾಮೆಗೆ ನಾನು ಸಿದ್ಧ, ಅವರು?: ಕುಮಾರಸ್ವಾಮಿಗೆ ಸವಾಲೆಸೆದ ರವಿ

05:33 PM Aug 13, 2021 | Team Udayavani |

ಚಿಕ್ಕಮಗಳೂರು : ನಾನು ಸಚಿವನಾಗಿದ್ದಾಗ ಅತೀ ಹೆಚ್ಚು ಅನುದಾನ ಕೊಟ್ಟಿರುವುದು ಮೂಡಿಗೆರೆಗೆ. ಅತಿ ಹೆಚ್ಚು ಅನುದಾನ ಹೋಗದಿದ್ದರೇ ನಾನು ರಾಜೀನಾಮೆ ಕೊಡ್ತೀನಿ… ಅವರು. ಕೊಡುತ್ತಾರೆಯೇ..? ಎಂದು ಎಂ.ಪಿ. ಕುಮಾರಸ್ವಾಮಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸವಾಲು ಹಾಕಿದ್ದಾರೆ.

Advertisement

ಇದನ್ನೂ ಓದಿ : ಚೀನಾ ಟು ಟರ್ಕಿ, ಜಪಾನ್…ಭಾರೀ ಮಳೆ, ಪ್ರವಾಹಕ್ಕೆ ತತ್ತರ, ಜನಜೀವನ ಅಸ್ತವ್ಯಸ್ತ

ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ಕುಮಾರಸ್ವಾಮಿ ಮನಸ್ಸಲ್ಲಿ ಏನೋ ಇಟ್ಕೊಂಡು, ಏನೋ ಮಾತನಾಡ್ತಿದ್ದಾರೆ. ಕುಮಾರಸ್ವಾಮಿ ಮೊದಲು ತಮ್ಮ ಕ್ಷೇತ್ರದ ವ್ಯಾಪ್ತಿಯನ್ನ ತಿಳಿದುಕೊಳ್ಳಲಿ. ನಾನು ಸಚಿವನಾಗಿದ್ದ ವೇಳೆ ಮೂಡಿಗೆರೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದೇನೆ.  ಅನುಮಾನವಿದ್ದರೇ, ಜಿಲ್ಲಾಧಿಕಾರಿಗಳ‌ ಬಳಿ ದಾಖಲೆ ತೆಗೆಸಿ ನೋಡಲಿ ಎಂದಿದ್ದಾರೆ.

ಕುಮಾರಸ್ವಾಮಿ ಅವರು ಉದ್ದೇಶವೇ ಬೇರೆ ಇದೆ. ಅವರಿಗೆ ಶಕ್ತಿ ಮೀರಿ ಅನುದಾನವನ್ನು ಕೊಟ್ಟಿದ್ದೇನೆ. ಅನುದಾನ ಕೊಟ್ಟಿಲ್ಲ ಅಂದರೇ, ನಾನು ರಾಜೀನಾಮೆಗೆ ಸಿದ್ದ. ಅವರು ಸಿದ್ದನಾ ಎಂದು ಕುಮಾರಸ್ವಾಮಿಗೆ ಸಿ.ಟಿ. ರವಿ ಸವಾಲೆಸೆದಿದ್ದಾರೆ.

ಇದನ್ನೂ ಓದಿ : 55 ಸಾವಿರ ಅಂಕ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್; ಸಾರ್ವಕಾಲಿಕ ಗರಿಷ್ಠ ದಾಖಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next