Advertisement

ದಿಲ್ಲಿಯಲ್ಲಿ ನನ್ನ ಹೆಸರು ಹೇಳಿ ಮಾರ್ಕೆಟ್ ಮಾಡ್ಕೊಳ್ತಿದಾರೆ: ಸಿಟಿ ರವಿಗೆ ಕುಟುಕಿದ ಡಿಕೆಶಿ

04:12 PM Oct 08, 2020 | keerthan |

ಬೆಂಗಳೂರು: ಸಿಟಿ ರವಿ ದಿಲ್ಲಿಗೆ ಹೋಗಿದಾರೆ. ಅವರಿಗೆ ನನ್ನ ಹೆಸರು ಹೇಳಿದರೆ ದಿಲ್ಲಿಯಲ್ಲಿ ಮಾರ್ಕೆಟ್ ಆಗುತ್ತದೆ. ಕೆಲವರು ನನ್ನ ಹೆಸರು ಹೇಳಿ ಮಾರ್ಕೆಟ್ ಮಾಡಿಕೊಳ್ಳುತ್ತಾರೆ. ಸಿ.ಟಿ ರವಿಯವರು ಈಗ ನನ್ನ ಹೆಸರು ಹೇಳಿ ದಿಲ್ಲಿಯಲ್ಲಿ ಮಾರ್ಕೆಟ್ ಮಾಡ್ಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಉಪಚುನಾವಣೆಯ ಅಧಿಕೃತ ನೋಟಿಫಿಕೇಶನ್ ಆದ ಮೇಲೆ 14ಕ್ಕೆ ಆರ್ ಆರ್ ನಗರ, ಶಿರಾ 15 ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇವೆ ಎಂದರು.

ಇದನ್ನೂ ಓದಿ:ಸಿ.ಟಿ. ರವಿ ರಾಜ್ಯ ಬಿಜೆಪಿ ಉಸ್ತುವಾರಿ ; ದಕ್ಷಿಣ ಭಾರತದ ಐದು ರಾಜ್ಯಗಳ ಹೊಣೆ

ಶಿರಾದಲ್ಲಿ ರಾಕೇಶ್ ಗೌಡ ಯಾರು ಅಂತ ಗೊತ್ತಿಲ್ಲ. ಪಕ್ಷದಿಂದ ಈ ಬಾರಿ ಜಯಚಂದ್ರ ಹೆಸರಷ್ಟೆ ಕಳಿಸಿದ್ದು, ಎರಡೂ ಕ್ಷೇತ್ರದಲ್ಲಿ ಒಂದೇ ಹೆಸರು ಸೇರಿಸಿಕೊಂಡಿದ್ದೇವೆ. ಕುಸುಮಾ ಆಯ್ಕೆ ಮಾಡುವ ಮೊದಲು ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಿಸಿದ್ದೇನೆ ಎಂದು ಆಯ್ಕೆ ಪ್ರಕ್ರಿಯೆ ಬಗ್ಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next