Advertisement

ಚನ್ನಪಟ್ಟಣದಿಂದ ಸ್ಪರ್ಧಿಸಿ ಎಚ್ಡಿಕೆಗೆ ಸಿಪಿವೈ ಸವಾಲು

06:55 AM Apr 06, 2018 | Team Udayavani |

ರಾಮನಗರ: ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುವ ಬದಲು ಚನ್ನಪಟ್ಟಣದಿಂದ ಮಾತ್ರ ಸ್ಪರ್ಧಿಸುವಂತೆ ಮಾಜಿ ಸಿಎಂ ಕುಮಾರಸ್ವಾಮಿಗೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಸವಾಲು ಹಾಕಿದ್ದಾರೆ. 

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,”ರಾಮನಗರದಲ್ಲಿ ಕುಮಾರಸ್ವಾಮಿ ತಮ್ಮ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳಲಿ. ಚನ್ನಪಟ್ಟಣದಲ್ಲಿ ನನ್ನ ವಿರುದಟಛಿ ಸ್ಪರ್ಧಿಸಲಿ. ನಾನು ಅವರ ಸ್ಪರ್ಧೆಯನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸುತ್ತೇನೆ. ನಾನೆಂದೂ ದೇವೇಗೌಡರಿಗೆ ಅಗೌರವ ತರುವಂತೆ ಮಾತನಾಡಿಲ್ಲ. ಮಾತನಾಡುವುದೂ ಇಲ್ಲ’ ಎಂದರು. ಸಿಂಗಾಪುರ, ಮಲೇಷ್ಯಾಗಳಲ್ಲಿ ಕುಮಾರ ಸ್ವಾಮಿಗೆ ಸೇರಿದ ಆಸ್ತಿಗಳಿವೆ ಎಂದು ಕೆಲವರು ತಮಗೆ ಮಾಹಿತಿ ನೀಡಿದ್ದಾರೆಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next