Advertisement

Byndoor: ಮಹಿಳೆ ಅನುಮಾನಾಸ್ಪದ ಸಾವು

09:11 PM Jun 11, 2024 | Team Udayavani |

ಉಪ್ಪುಂದ: ಅಸ್ವಸ್ಥಳಾಗಿ ಕುಸಿದು ಬಿದ್ದು ಮಹಿಳೆ ಮೃತಪಟ್ಟ ಘಟನೆ ಜೂ.10ರಂದು ಬೈಂದೂರಿನಲ್ಲಿ ಸಂಭವಿಸಿದ್ದು ಮಹಿಳೆಯ ಸಾವಿನ ಕುರಿತು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

ಬೈಂದೂರಿನ ನಿವಾಸಿ ನಾಗರತ್ನ (42) ಮೃತಮಟ್ಟ ಮಹಿಳೆ.

ನಾಗರತ್ನ  ಅವರು 20 ವರ್ಷಗಳ ಹಿಂದೆ ಉಡುಪಿಯ ಕಲ್ಮಂಜ ನಿವಾಸಿ ಪ್ರವೀಣ್‌ ಅವರನ್ನು ಪ್ರೀತಿಸಿ ಮದುವೆಯಾಗಿ ಬ್ರಹ್ಮಾವರದ ಮಟಾ³ಡಿಯಲ್ಲಿ ವಾಸಮಾಡಿಕೊಂಡಿದ್ದರು. 4 ವರ್ಷಗಳ ಹಿಂದೆ ಪತಿ ಬಿಟ್ಟು ಹೋಗಿದ್ದರು. ಪ್ರಸ್ತುತ 2 ತಿಂಗಳ ಹಿಂದೆ ಮಟಾ³ಡಿಯ ಮನೆ ಬಿಟ್ಟು ಬೈಂದೂರು ಯೋಜನಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ನವೀನ್‌ ಅವರ ಜತೆ ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದರು.

ಜೂ. 10ರಂದು ಬೆಳಗ್ಗೆ ನಾಗರತ್ನ ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಮೃತಪಟ್ಟಿರುವುದು ತಿಳಿಯಿತು. ಮನೆಯವರು ನಾಗರತ್ನ ಅವರ ಸಾವಿನಲ್ಲಿ ಅನುಮಾನ ವ್ಯಕ್ತಡಿಸಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next