Advertisement

Channapatna ಡಿಕೆಶಿ ನೇತೃತ್ವದಲ್ಲಿ ಉಪ ಚುನಾವಣೆ: ಡಿ.ಕೆ.ಸುರೇಶ್‌

12:57 AM Jul 30, 2024 | Team Udayavani |

ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆ ತಯಾರಿ ನಡೆಯುತ್ತಿದೆ. ಅಭ್ಯರ್ಥಿ ಯಾರು ಎಂಬುದನ್ನು ಕಾದು ನೋಡಿ ಎಂದಿರುವ ಮಾಜಿ ಸಂಸದ ಡಿ.ಕೆ.ಸುರೇಶ್‌ ಕುತೂಹಲ ಹೆಚ್ಚಿಸಿದ್ದಾರೆ. ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಉಪ ಚುನಾವಣಾ ತಯಾರಿ ನಡೆದಿದೆ.

Advertisement

ಯಾರು ಬೇಕಿದ್ದರೂ ಅಭ್ಯರ್ಥಿ ಆಗಬಹುದು. ಮಾಧ್ಯಮದವರು ಇಚ್ಛೆಪಟ್ಟರೂ ಅಭ್ಯರ್ಥಿ ಮಾಡಬಹುದು. ಅಭ್ಯರ್ಥಿ ಯಾರೆಂಬುದನ್ನು ಕಾದು ನೋಡಿ ಎಂದಷ್ಟೇ ಹೇಳಿದರು.

ಜನ ನನಗೆ ವಿಶ್ರಾಂತಿ ಕೊಟ್ಟಿದ್ದಾರೆ. ನಾನೀಗ ಸದ್ಯಕ್ಕೆ ವಿಶ್ರಾಂತಿಯಲ್ಲಿದ್ದೇನೆ. ನಾನು ಆಕಾಂಕ್ಷಿಯೂ ಅಲ್ಲ. ಸ್ಪರ್ಧಿಸುವುದೂ ಇಲ್ಲ. ಮತ್ತೆ ಬಂದು ಸಿಎಂ ಆಗುತ್ತೇನೆ ಎಂದು ಯಾರೋ ಹೇಳುತ್ತಾರಲ್ಲಾ… ಹಾಗೆ ನಾನು ರಾಜಕಾರಣದ ಆ ಸ್ಥಾನದಲ್ಲಿ ಇರಬೇಕು, ಈ ಸ್ಥಾನದಲ್ಲಿ ಇರಬೇಕು ಎಂದು ಬಯಸುವವನೂ ಅಲ್ಲ. ಜನ ಅಧಿಕಾರ ಕೊಟ್ಟಿದ್ದರು. ಅದಕ್ಕೆ ತಕ್ಕಂತೆ ಕೆಲಸ ಮಾಡಿದ್ದೆ. ಆತ್ಮತೃಪ್ತಿ ಇದೆ. ಯಾರಿಗೂ ಕೆಟ್ಟದ್ದು ಬಯಸುವವನಲ್ಲ. ಒಳ್ಳೆಯದನ್ನು ಬಯಸುವವನಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next