Advertisement

By-Election: ಉತ್ತರಾಖಂಡ, ಬಂಗಾಳದಲ್ಲಿ ಹಿಂಸಾಚಾರ…

11:13 PM Jul 10, 2024 | Team Udayavani |

ನವದೆಹಲಿ: 7 ರಾಜ್ಯಗಳ 13 ವಿಧಾನಸಭೆಗಳಿಗೆ ಬುಧ ವಾರ ಉಪ ಚುನಾವಣೆ ನಡೆಯಿತು. ಈ ವೇಳೆ ಉತ್ತ ರಾಖಂಡ, ಪಶ್ಚಿಮ ಬಂಗಾಳದಲ್ಲಿ ಹಿಂಸಾ ಚಾರದ ಘಟನೆ ನಡೆದಿವೆ. ಲೋಕ ಸಭೆ ಚುನಾವಣೆ ಬಳಿಕ ನಡೆದ ಮೊದಲ ಉಪ ಚುನಾವಣೆಯಲ್ಲಿ ಹಲವು ಪ್ರಮುಖ ನಾಯಕರು ಸ್ಪರ್ಧಿಸಿದ್ದರು. ಪಶ್ಚಿಮ ಬಂಗಾಳದ 4, ಹಿಮಾಚಲ ಪ್ರದೇಶದ 3, ಉತ್ತರ ಪ್ರದೇಶದ 2, ತಮಿಳುನಾಡು, ಮಧ್ಯಪ್ರದೇಶ, ಪಂಜಾಬ್‌, ಬಿಹಾರಗಳಲ್ಲಿನ ತಲಾ 1 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು.

Advertisement

ಉತ್ತರಾಖಂಡದ ಮಂಗಲೂರಿನಲ್ಲಿ ನಡೆದ ಹಿಂಸಾಚಾರದಲ್ಲಿ 4 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಬೂತ್‌ನಲ್ಲಿ ಬೆಂಕಿ ಹಚ್ಚಲಾಗಿತ್ತು ಎಂದು ಸಹ ವರದಿಗಳು ತಿಳಿಸಿವೆ. ಪಶ್ಚಿಮ ಬಂಗಾಳದ ಬಾಗ್ಧಾಹ್‌ ಮತ್ತು ರಣಘಾಟ್‌ ದಕ್ಷಿಣ ಕ್ಷೇತ್ರಗಳಲ್ಲಿ ಹಿಂಸಾಚಾರ ನಡೆದಿದೆ. ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಜಟಾಪಟಿಗಳು ನಡೆದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ತನ್ನ ವಿರುದ್ಧ ಹುರುಳಿಲ್ಲದ ಆರೋಪಗಳನ್ನು ಮಾಡ ಲಾಗುತ್ತಿದೆ ಎಂದು ಹೇಳಿದೆ. ಹಿಮಾಚಲ ಪ್ರದೇಶ ಸಿಎಂ ಸುಖ್‌ವಿಂದರ್‌ ಸಿಂಗ್‌ ಸುಖು ಪತ್ನಿ ಕಮಲೇಶ್‌ ಠಾಕೂರ್‌ ಸ್ಪರ್ಧಿಸಿದ್ದರು. ಶಾಸಕರ ಸಾವು ಮತ್ತು ರಾಜೀನಾಮೆಯ ಹಿನ್ನೆಲೆಯಲ್ಲಿ ಈ ಚುನಾವಣೆಯನ್ನು ನಡೆಸಲಾಗಿತ್ತು. ಜು. 13ರಂದು ಫ‌ಲಿತಾಂಶ ಪ್ರಕಟವಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next