Advertisement
ನಗರದ ಐಟಿಐ ಕ್ರೀಡಾಂಗಣದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಮಾತನಾಡಿ, 2022ರ ವೇಳೆಗೆ ದೇಶದ ಪ್ರತಿಯೊಬ್ಬ ನಾಗರಿಕನೂ ತನ್ನ ಸ್ವಂತ ಸೂರು ಹೊಂದುವ ಮಹತ್ವದ ನಿರ್ಧಾರವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ ಎಂದರು.
Related Articles
Advertisement
ನಮ್ಮ ಇಲಾಖೆಯ ಪ್ರಮುಖ ಅಜೆಂಡಾ ಉದ್ಯೋಗ ಸೃಷ್ಟೀಕರಣ, ಕೈಗಾರಿಕಾ ಸಂಸ್ಥೆಗಳು ಮತ್ತು ಕಾರ್ಮಿಕರ ನಡುವೆ ಉತ್ತಮ ಸಂಬಂಧವನ್ನಿರಿಸುವುದು, ಕಾರ್ಮಿಕರ ಹಿತದೃಷ್ಟಿಯಿಂದ ಸುಧಾರಣೆಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ಕಾರ್ಮಿಕರ ಸಂಬಳ ಮತ್ತು ಕೈಗಾರಿಕಗೆಳೊಂದಿಗೆ ಇರಬೇಕಾದ ನಂಟನ್ನು ಮುಂದಿನ ಲೋಕ ಮತ್ತು ರಾಜ್ಯಸಭೆಯ ಚರ್ಚೆಗಳಲ್ಲಿ ನಡೆಯಲಿದ್ದು ಹಲವು ಸುಧಾರಣೆಗಳು ನಡೆಯಲಿವೆ ಎಂದರು.
ದೇಶದಲ್ಲಿರುವ 42 ಕೋಟಿ ಅಸಂಘಟಿತ ಕಾರ್ಮಿಕರನ್ನು ದೃಷ್ಟಿಯಲ್ಲಿರಿಸಿರುವ ಕೇಂದ್ರ ಬಹುಸಂಖ್ಯೆಯಲ್ಲಿರುವ ಅವರ ಕ್ಷೇಮಾಭಿವೃದ್ಧಿಗೆ ಹಲವು ಯೋಜನೆಗಳ ಫಲ ನೀಡಲಿದ್ದು ಯುವಿಲ್ ಎಂಬ ಗುರಿತಿನ ಚೀಟಿ ನೀಡುವ ಸಾಮಾಜಿಕ ಭದ್ರತೆಗೆ ಅಗತ್ಯವಿರುವ ಆರೋಗ್ಯ, ವಿಮೆ ಸೇರಿ ಹಲವು ಸೌಲಭ್ಯಗಳನ್ನು ಅಸಂಘಟಿತ ಕಾರ್ಮಿಕರು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಜಾತಿ, ಧರ್ಮ, ಅಧಿಕಾರಗಳ ನಡುವೆ ವಿಭಜನೆಯಾಗಿರುವ ಪ್ರಜೆಗಳು ನಾವು ಭಾರತೀತಯರೆಂದು ಹೇಳಿಕೊಳ್ಳುವ ಏಕತೆ ಮೂಡಬೇಕಿದೆ ಎಂದರು. ಕೇಂದ್ರ ಭವಿಷ್ಯನಿಧಿ ಆಯುಕ್ತ ಡಾ.ವಿ.ಪಿ ಜಾಯ್ ಮಾತನಾಡಿ, ದೇಶದಲ್ಲಿ ಇದುವರೆಗೂ 1 ಕೋಟಿ ಸದಸ್ಯರನ್ನು ಭವಿಷ್ಯ ನಿಧಿಗೆ ನೋಂದಣಿ ಮಾಡಿದ್ದು, ಕರ್ನಾಟಕದಲ್ಲಿ 13 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿದೆ.
ರಾಜ್ಯದಲ್ಲಿ 17 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ, ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಆಡಳಿತ ಕಚೇರಿಗಳನ್ನು ಶೀಘ್ರದಲ್ಲೇ ಪ್ರಾರಂಭ ಮಾಡಲಿದ್ದೇವೆ. ಕೆಆರ್ಪುರದಲ್ಲಿ ಪ್ರಾದೇಶಿಕ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ್ದು, ಚಿಕ್ಕಮಗಳೂರಿನ ಪ್ರಾದೇಶಿಕ ಕಚೇರಿಗೆ ಶಂಕು ಸ್ಥಾಪನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಐಟಿಐ ಕ್ರೀಡಾಂಗಣದಿಂದ ಅಂಚೆ ಕಚೇರಿಯವರಗೆ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾಮಂದಿರ, ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಥಮ ದರ್ಜೆ ಕಾಲೇಜು. ಎಸ್ಇಎ ಶಾಲೆ ಸೇರಿದಂತೆ ಕೆಆರ್ಪುರ ಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು.
ಶಾಸಕ ಬಿ.ಎ ಬಸವರಾಜ್, ಸಂಸದ ಪಿ.ಸಿ ಮೋಹನ್, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಕಾರ್ಯದರ್ಶಿ ಸತ್ಯವತಿ, ಕೇಂದ್ರ ಭವಿಷ್ಯ ನಿಧಿ ಅಪರ ಆಯುಕ್ತ ವಿಜಯ್ ಕುಮಾರ್, ಪಾಲಿಕೆ ಸದಸ್ಯ ಪೂರ್ಣಿಮಾ ಶ್ರೀನಿವಾಸ್, ಬಂಡೆ ರಾಜು ಇತರರು ಇದ್ದರು.