Advertisement

ಗಾಜಿಯಾಬಾದ್‌ ರೈಲು ಹಳಿ ಮೇಲೆ ಬಕ್ಸಾರ್‌ ಜಿಲ್ಲಾ ಮ್ಯಾಜಿಸ್ಟ್ರೇಟರ ಶವ

11:32 AM Aug 11, 2017 | udayavani editorial |

ಗಾಜಿಯಾಬಾದ್‌, ಉತ್ತರ ಪ್ರದೇಶ : ಬಿಹಾರದ ಹಿರಿಯ ಐಎಎಸ್‌ ಅಧಿಕಾರಿ ಹಾಗೂ ಬಕ್ಸಾರ್‌ನ ಜಿಲ್ಲಾ ಮ್ಯಾಜಿಸ್ಟೇಟ್‌ ಆಗಿರುವ ಮುಕೇಶ್‌ ಪಾಂಡೆ ಮೃತ ದೇಹ ಇಲ್ಲಿಗೆ ಸಮೀಪದ ರೈಲು ಹಳಿಯ ಮೇಲೆ ಪತ್ತೆಯಾಗಿದೆ. ಶವದ ಪಕ್ಕದಲ್ಲೇ ಪಾಂಡೆ ಅವರು ಬರೆದಿಟ್ಟಿರುವ ಡೆತ್‌ ನೋಟ್‌ ಪೊಲೀಸರಿಗೆ ಸಿಕ್ಕಿದೆ.

Advertisement

2012ನ ಐಎಎಸ್‌ ಬ್ಯಾಚ್‌ಗೆ ಸೇರಿದ ಪಾಂಡೆ ಅವರು “ಜೀವನದಲ್ಲಿ ನಾನು ತೀವ್ರ ಜುಗುಪ್ಸೆ ಪಟ್ಟಿದ್ದೇನೆ; ಮನುಷ್ಯನ ಬದುಕಿನ ಮೇಲೇ ನನಗೆ ವಿಶ್ವಾಸ ಹೊರಟುಹೋಗಿದೆ’ ಎಂದು ತಮ್ಮ ಡೆತ್‌ ನೋಟ್‌ನಲ್ಲಿ ಹೇಳಿದ್ದಾರೆ. 

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಪಾಂಡೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಆತನೋರ್ವ ಉತ್ತಮ ಆಡಳಿತಗಾರನಾಗಿದ್ದರು ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next