Advertisement

ಮಹಾಪೋಷಕರಾಗಿ ಉದ್ಯಮಿ ರಘುರಾಮ ಕೆ. ಶೆಟ್ಟಿ ಕೂಳೂರು ನೇಮಕ

01:42 PM Aug 18, 2021 | Team Udayavani |

ಮುಂಬಯಿ: ಮುಂಬಯಿಯ ಖ್ಯಾತ ಉದ್ಯಮಿ, ಹೇರಂಬಾ ಆಗ್ರೋ ಕೆಮಿಕಲ್ಸ್‌ ಇಂಡಸ್ಟ್ರೀಸ್‌ ಇದರ ಆಡಳಿತ ನಿರ್ದೇಶಕರಾಗಿರುವ ರಘುರಾಮ ಕೆ. ಶೆಟ್ಟಿ ಕೂಳೂರು ಕನ್ಯಾನ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾಪೋಷಕರಾಗಿ ನೇಮಕಗೊಂಡಿದ್ದಾರೆ.

Advertisement

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಸೇವೆಯನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಯಶಸ್ವಿಯಾಗಿ ನಡೆಸಿ, ಆರ್ಥಿಕವಾಗಿ ಹಿಂದುಳಿದ ಸಮಾಜದ ಜನರ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವುದನ್ನು ಮೆಚ್ಚಿದ ರಘುರಾಮ ಶೆಟ್ಟಿ ಅವರು ಒಕ್ಕೂಟದ ಮಹಾಪೋಷಕರಾಗಿ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ:ಬಿಜೆಪಿ ಯೋಜನೆಗಳನ್ನು ಜನ ಸ್ವಾಗತಿಸುತ್ತಿದ್ದಾರೆ, ಕಾಂಗ್ರೆಸ್ ಬೂಟಾಡಿಕೆ ಮಾಡ್ತಿದೆ : ಕಾರಜೋಳ

ರಘುರಾಮ ಕೆ. ಶೆಟ್ಟಿ ಕೂಳೂರು ಅವರು ಒಕ್ಕೂಟದ ಮೂಲಕ ಸಮಾಜದ ಆರ್ಥಿಕ ಹಿಂದುಳಿದ ಜನರ ಸೇವೆ ಮಾಡಬೇಕೆನ್ನುವ ಹಂಬಲದಿಂದ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದು, ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next