Advertisement

ಉದ್ಯಮಿಯ ಬ್ಲ್ಯಾಕ್‌ ಮೇಲ್: ಪ್ರಕರಣ ದಾಖಲು

12:21 AM Jan 09, 2023 | Team Udayavani |

ಕುಂದಾಪುರ : ಉದ್ಯಮಿಯೊಬ್ಬರ ಕುರಿತು ಕೀಳಾಗಿ ಬರೆದು ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ಗೆ ಇಳಿದ ಪತ್ರಕರ್ತರ ವಿರುದ್ಧ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸಹನಾ ಎಸ್ಟೇಟ್‌ ಆಡಳಿತ ಸಂಸ್ಥೆಯ ಪಾಲುದಾರ ಸುರೇಂದ್ರ ಶೆಟ್ಟಿ ಅವರು ದೂರು ನೀಡಿದ್ದು ಟಿ.ಪಿ. ಮಂಜುನಾಥ, ಹರೀಶ್‌ ಭಂಡಾರಿ ಕುಂಭಾಶಿ, ಮಜಾರ್‌ ಹಾಗೂ ಇನ್ನಿತರ ನಕಲಿ ಪತ್ರಕರ್ತರು ಸೇರಿಕೊಂಡು ಅಸಹ್ಯವಾಗಿ ಪತ್ರಿಕೆಯೊಂದರಲ್ಲಿ ಬರೆದಿದ್ದಾರೆ. ಸುರೇಂದ್ರ ಶೆಟ್ಟಿ ಹಾಗೂ ಅವರ ಸಂಸ್ಥೆಯ ಹೆಸರನ್ನು ಕೆಡಿಸಿ ಬ್ಲ್ಯಾಕ್‌ ಮೇಲ್‌ ಮಾಡಲು ಒಳಸಂಚು ರೂಪಿಸಿದ್ದಾರೆ ಎಂದು ದೂರಲಾಗಿದೆ. ವಾಟ್ಸ್‌ಆ್ಯಪ್‌ ನಲ್ಲಿ ಪತ್ರಿಕೆಯ ಪುಟ ಕಳುಹಿಸಿ 50 ಲಕ್ಷ ರೂ. ನಗದು ನೀಡುವಂತೆ ಬೆದರಿಕೆ ಹಾಕಿರುವಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next