Advertisement

ಬುಶ್‌ಫೈರ್‌: ಜೆರ್ಸಿ ಬಿಡುಗಡೆ ಮಾಡಿದ ತೆಂಡುಲ್ಕರ್‌, ಯುವಿ

10:06 AM Feb 08, 2020 | Sriram |

ಮೆಲ್ಬರ್ನ್: ಸಚಿನ್‌ ತೆಂಡುಲ್ಕರ್‌ ಕ್ರಿಕೆಟ್‌ ಬದುಕಿನಲ್ಲಿ ಆಸ್ಟ್ರೇಲಿಯದೊಂದಿಗಿನ ಸಂಬಂಧ ಭಾವನಾತ್ಮಕವಾದದ್ದು. ಇದೀಗ ಆಸ್ಟ್ರೇಲಿಯದ ಕಾಡ್ಗಿಚ್ಚಿನಿಂದ ನಲುಗಿದವರಿಗಾಗಿ ನಡೆಯುವ ಸಹಾಯಾರ್ಥ ಪಂದ್ಯದಲ್ಲಿ ಪಾಲ್ಗೊಳ್ಳುವ ಮೂಲಕ ತೆಂಡುಲ್ಕರ್‌ ಈ ದೇಶದ ಋಣ ತೀರಿಸಲು ಮುಂದಾಗಿದ್ದಾರೆ.

Advertisement

ಈಗಾಗಲೇ ಆಸ್ಟ್ರೇಲಿಯಕ್ಕೆ ಆಗಮಿಸಿರುವ ಸಚಿನ್‌ ತೆಂಡುಲ್ಕರ್‌, ಶುಕ್ರವಾರ ಯುವರಾಜ್‌ ಸಿಂಗ್‌ ಜತೆಗೂಡಿ ಬುಶ್‌ಫೈರ್‌ ಬಾಶ್‌ ತಂಡದ ಜೆರ್ಸಿಯನ್ನು ಬಿಡುಗಡೆ ಮಾಡಿದರು. ಯುವರಾಜ್‌ ಈ ಸಹಾಯಾರ್ಥ ಪಂದ್ಯದಲ್ಲಿ ಆಡಲಿದ್ದಾರೆ.

ಬ್ರೆಟ್‌ ಲೀ ಆಹ್ವಾನ
ತೆಂಡುಲ್ಕರ್‌ ಅವರನ್ನು ಆಸ್ಟ್ರೇಲಿಯಕ್ಕೆ ಆಹ್ವಾನಿಸಿದ್ದು ಸ್ನೇಹಿತ ಬ್ರೆಟ್‌ ಲೀ. ಮೆಲ್ಬರ್ನ್ನ ಜಂಕ್ಷನ್‌ ಓವಲ್‌ ಮೈದಾನದಲ್ಲಿ ಕಾಡ್ಗಿಚ್ಚು ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವ ಸಲುವಾಗಿ ನಡೆಯಲಿರುವ ಬುಶ್‌ಫೈರ್‌ ಬಾಶ್‌ ಪಂದ್ಯದಲ್ಲಿ ರಿಕಿ ಪಾಂಟಿಂಗ್‌ ಇಲೆವೆನ್‌ ತಂಡಕ್ಕೆ ತೆಂಡುಲ್ಕರ್‌ ಕೋಚ್‌ ಆಗಲಿದ್ದಾರೆ.
“ಬ್ರೆಟ್‌ ಲೀ ಅವರಿಂದ ಆಹ್ವಾನ ಬಂದಾಗ ಹಿಂದೆಮುಂದೆ ಆಲೋಚಿಸುವ ಪ್ರಶ್ನೆಯೇ ಇಲ್ಲ. ಲೀ ಕರೆದಾಗ ಖಂಡಿತ ಬರುತ್ತೇನೆ, ಇದಕ್ಕಿಂತ ಖುಷಿ ಕೊಡುವ ಸಂಗತಿ ಇನ್ನೊಂದಿಲ್ಲ’ ಎಂದಿದ್ದಾರೆ ತೆಂಡುಲ್ಕರ್‌.

ಆಸ್ಟ್ರೇಲಿಯವನ್ನು ಕಾಡಿದ ಭೀಕರ ಕಾಡ್ಗಿಚ್ಚಿನ ಬಗ್ಗೆ ತೆಂಡುಲ್ಕರ್‌ ಬಹಳ ಚಿಂತಿತರಾಗಿದ್ದಾರೆ. ಮನುಷ್ಯರು ಮಾತ್ರವಲ್ಲದೆ ಸಾವಿರಾರು ಪ್ರಾಣಿ ಪಕ್ಷಿಗಳಿಗೂ ಕಾಡ್ಗಿಚ್ಚು ಮಾರಕವಾಗಿ ಪರಿಣಮಿಸಿದೆ. ನಾವು ಅವುಗಳ ಕುರಿತೂ ಚಿಂತಿಸಬೇಕೆಂದು ಅವರು ಹೇಳಿಕೊಂಡಿದ್ದಾರೆ.

18ನೇ ವರ್ಷದಲ್ಲಿ ತೆಂಡುಲ್ಕರ್‌ ಮೊದಲ ಬಾರಿಗೆ ಆಸ್ಟ್ರೇಲಿಯಕ್ಕೆ ಕ್ರಿಕೆಟ್‌ ಆಡಲು ಬಂದಿದ್ದರು. ಮೊದಲ ಪ್ರವಾಸದಲ್ಲಿ ಸುಮಾರು 4 ತಿಂಗಳ ಕಾಲ ಅವರು ಕಾಂಗರೂ ನಾಡಿನಲ್ಲಿದ್ದರು. ಭಾರತಕ್ಕೆ ವಾಪಸಾಗುವಾಗ ಆಸ್ಟ್ರೇಲಿಯದ ಉಚ್ಚಾರಣಾ ಶೈಲಿ ತನಗೆ ಬಹುತೇಕ ಕರಗತವಾಗಿತ್ತು ಎಂಬುದಾಗಿ ಅವರು ನೆನಪಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next