Advertisement

Kerala: ಕೇರಳದಲ್ಲಿ ಬಸ್‌ ಪಲ್ಟಿ; ಕೋಲಾರ ಮೂಲದ 12ಕ್ಕೂ ಹೆಚ್ಚು ಶಬರಿಮಲೆ ಯಾತ್ರಿಕರಿಗೆ ಗಾಯ

01:06 PM Oct 18, 2023 | Suhan S |

ಕೊಟ್ಟಾಯಂ: ಬಸ್‌ ಪಲ್ಟಿಯಾಗಿ ಕರ್ನಾಟಕದ 12ಕ್ಕೂ ಹೆಚ್ಚು ಶಬರಿಮಲೆ ಯಾತ್ರಿಕರು ಗಾಯಗೊಂಡಿರುವ ಕೇರಳದ ಅತ್ತಿವಲವುನ ಎರುಮೆಲಿನಲ್ಲಿ ಬುಧವಾರ ಮುಂಜಾನೆ(ಅ.18 ರಂದು) ನಡೆದಿದೆ.

Advertisement

ಕೊಟ್ಟಾಯಂ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಕರ್ನಾಟಕದ ಕೋಲಾರ ಮೂಲದ 12 ಕ್ಕೂ ಹೆಚ್ಚಿನ ಮಂದಿಗೆ ಗಾಯಾಗಳಾಗಿವೆ.

ಶಬರಿಮಲೆ ಯಾತ್ರಿಕರನ್ನು ಹೊತ್ತುಕೊಂಡು ಬಸ್ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಬೆಟ್ಟದ ದೇಗುಲಕ್ಕೆ ತೆರಳುತ್ತಿದ್ದ ವೇಳೆ ಪಲ್ಟಿಯಾಗಿದೆ. ಪರಿಣಾಮ 12 ಮಂದಿ ಗಾಯಗೊಂಡಿದ್ದಾರೆ.

ಬಸ್ಸಿನಲ್ಲಿ ಒಟ್ಟು 43 ಮಂದಿ ಇದ್ದರು, ಇದರಲ್ಲಿ 40 ಮಂದಿ ಯಾತ್ರಿಕರಾಗಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್‌ ಪಲ್ಟಿಯಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.

ಗಾಯಾಳುಗಳನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಂಜಿರಪಲ್ಲಿ ಜನರಲ್ ಆಸ್ಪತ್ರೆ ಮತ್ತು ಮುಕ್ಕುಟ್ಟುತಾರಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next