Advertisement

ದೋಟಿಹಾಳ: ನಿಯಂತ್ರಣ ತಪ್ಪಿ ರಸ್ತೆ ಬದಿ ವಾಲಿದ ಬಸ್; ತಪ್ಪಿದ ಭಾರೀ ಅನಾಹುತ

02:07 PM Aug 10, 2022 | Team Udayavani |

ದೋಟಿಹಾಳ: ವಾಯುವ್ಯ ಸಾರಿಗೆ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿದ್ದು, ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗದೆ  ಪ್ರಾಣಪಾಯದಿಂದ ಪಾರಾದ ಘಟನೆ ಗ್ರಾಮದ ಇಳಕಲ್ ಮುಖ್ಯ ರಸ್ತೆಯಲ್ಲಿ ಸಮೀಪ ಬುಧವಾರ ಸಂಭವಿಸಿದೆ.

Advertisement

ಇಳಕಲ್ ಪಟ್ಟಣದಿಂದ ದೋಟಿಹಾಳ ಮಾರ್ಗವಾಗಿ ಕುಷ್ಟಗಿ ಪಟ್ಟಣಕ್ಕೆ ಹೋಗುತ್ತಿರುವ ಬಸ್  ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿದ್ದು, ಬಸ್ ಇಳಕಲ್ ಡಿಪೋಗೆ  ಸೇರಿದ್ದು ಎನ್ನಲಾಗಿದೆ. ‌

ಇದನ್ನೂ ಓದಿ: ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯಾ?: ಸಿ.ಟಿ.ರವಿ ಕಿಡಿ

ಅದೇ ಬಸ್ ಮುಂಭಾಗ ಚಲಿಸುತ್ತಿದ್ದ ಕಾರೊಂದು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯ ಬಸ್ ಚಾಲಕ ಅಪಘಾತ ತಪ್ಪಿಸಲು ಪಕ್ಕದ ರಸ್ತೆಗೆ ಬಸ್ ಚಲಾಯಿಸಿದ್ದಾನೆ. ಸದ್ಯ ಮಳೆಯಿಂದ ಕಚ್ಚಾ ರಸ್ತೆಯ ಭೂಮಿ ಹಸಿಯಾದ ಹಿನ್ನೆಲೆ ಬಸ್ಸಿನ ಚಕ್ರಗಳು ಸಿಲುಕಿಕೊಂಡು ಒಂದು ಕಡೆ ವಾಲಿದೆ. ಆದರೆ ಪಕ್ಕದಲ್ಲಿರುವ ಗುಂಡಿಗೆ ಬಸ್ ವಾಲಿದ್ದರೆ ಭಾರೀ ಅನಾಹುತವೇ ಸಂಭವಿಸುತಿತ್ತು ಎನ್ನಲಾಗಿದೆ‌.

ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಬೇರೊಂದು ಬಸ್ಸಿಗೆ ಕಳಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next