Advertisement

ಬಾರದ ಬಸ್‌; ಚುನಾವಣೆಸಿಬ್ಬಂದಿ ಪ್ರತಿಭಟನೆ

11:45 AM Apr 17, 2019 | Team Udayavani |

ಬಾಗಲಕೋಟೆ: ಲೋಕಸಭೆ ಚುನಾವಣೆಗೆ ನಿಯುಕ್ತಿಗೊಂಡ ಸಿಬ್ಬಂದಿಗಳಿಗೆ ಸಮರ್ಪಕ ಬಸ್‌ ಸೌಲಭ್ಯ ಒದಗಿಸದೇ ಇರುವುದುನ್ನು ಖಂಡಿಸಿ, ಚುನಾವಣೆ ಸಿಬ್ಬಂದಿ ಪ್ರತಿಭಟನೆ ನಡೆಸಿದ ಪ್ರಸಂಗ ಮಂಗಳವಾರ ನಡೆಯಿತು.

Advertisement

ಇದೇ ವೇಳೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಚುನಾವಣೆ ಸಿಬ್ಬಂದಿ ಮಧ್ಯೆ ವಾಗ್ವಾದವೂ ನಡೆಯಿತು. ಮಂಗಳವಾರ ನವನಗರದ ಬಸ್‌ ನಿಲ್ದಾಣಕ್ಕೆ ಬೆಳಗ್ಗೆ ಬಾಗಲಕೋಟೆಯಿಂದ ತೇರದಾಳಕ್ಕೆ ತೆರಳಲು ಚುನಾವಣಾ ಸಿಬ್ಬಂದಿ ಆಗಮಿಸಿದ್ದರು. ಈ ವೇಳೆ ಪೂರ್ವ ನಿಗದಿಯಂತೆ 5 ಬಸ್‌ ಮಾತ್ರ ಬಿಡಲು ಮುಂದಾದಾಗ, ಹೆಚ್ಚುವರಿ ಬಸ್‌ ಬಿಡುವಂತೆ ಚುನಾವಣೆ ಸಿಬ್ಬಂದಿ ಆಗ್ರಹಿಸಿದರು. ಇದಕ್ಕೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ನಿರಾಕರಿಸಿದರು. ಇದರಿಂದ ತೀವ್ರ ವಾಗ್ವಾದ ನಡೆಯಿತು. ಬಳಿಕ ಸ್ಥಳಕ್ಕೆ ತಹಶೀಲ್ದಾರ್‌ ಆಗಮಿಸಿ ಸಮಜಾಯಿಸಿ ನೀಡಿ ಚುನಾವಣಾ ಸಿಬ್ಬಂದಿ ಮನವೊಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next