Advertisement

ಉಡುಪಿ: ಕರ್ತವ್ಯಕ್ಕೆ ಹಾಜರಾಗದ ಕೆಎಸ್ಆರ್ ಟಿಸಿ ನೌಕರರು, ದೂರದೂರಿನ ಪ್ರಯಾಣಿಕರ ಪರದಾಟ

09:33 AM Apr 07, 2021 | Team Udayavani |

ಉಡುಪಿ: ಕೆಎಸ್ಆರ್ ಟಿಸಿ ನೌಕರರ ಮುಷ್ಕರ ಉಡುಪಿ ಜಿಲ್ಲೆಯಲ್ಲಿಯೂ ಕಂಡು ಬಂತು. ಹೊರ ಜಿಲ್ಲೆಗೆ ಹೋಗುವವರು ಬಸ್ ಸ್ಟ್ಟಾಂಡ್ ನಲ್ಲಿ ಕಾದು ಕುಳಿತ ದೃಶ್ಯಗಳು ಕಂಡು ಬಂತು.

Advertisement

ಉಡುಪಿ ಕೆಎಸ್ಆರ್ ಟಿಸಿ ಡಿಪೋದಿಂದ ಮಂಗಳವಾರ ಹೊರಟ ಬಸ್ಸುಗಳು ಆಗಮಿಸಲಿಲ್ಲ. ಉಡುಪಿ ಡಿಪೋದಲ್ಲಿ ನಿಂತಿರುವ ಬಸ್ಸುಗಳೂ ನೌಕರರು ಆಗಮಿಸದ ಕಾರಣ ಸ್ಥಗಿತಗೊಂಡಿದ್ದವು.

ಬೆಳಗ್ಗಿನ ಹೊತ್ತು ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ದೂರದ ಊರುಗಳಿಗೆ ತೆರಳುವವರು ತೊಂದರೆಗೊಳಗಾದರು. ಇದರಿಂದಾಗಿ ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಕರು ಅತ್ಯಧಿಕ ಸಂಖ್ಯೆಯಲ್ಲಿ ಕಂಡುಬಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next