Advertisement

ನಡು ರಸ್ತೆಯಲ್ಲಿ ಬಸ್‌ ನಿಲ್ಲಿಸಿ ಸಂಚಾರ ನಿಯಮ ಉಲ್ಲಂಘನೆ: ಕ್ರಮಕ್ಕೆ ಆಗ್ರಹ

11:16 PM Jun 21, 2019 | mahesh |

ಮಹಾನಗರ: ನಗರದಲ್ಲಿ ಬಹುತೇಕ ಸಿಟಿ ಬಸ್‌ಗಳನ್ನು ಚಾಲಕರು ಬಸ್‌ ಬೇ ಒಳಗಡೆ ನಿಲ್ಲಿಸದೆ ನಡು ರಸ್ತೆ ಯಲ್ಲಿ ನಿಲ್ಲಿಸಿ ಇತರ ವಾಹನಗಳ ಸಂಚಾರಕ್ಕೆ ತಡೆ ಉಂಟು ಮಾಡುತ್ತಿದ್ದಾರೆ; ಕೆಲವು ಮಂದಿ ನಿರ್ವಾಹಕರು ಮಹಿಳಾ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸುತ್ತಾರೆ; ಮಹಿಳಾ ಮೀಸಲು ಸೀಟು ಬಿಟ್ಟು ಕೊಡಿಸುವಲ್ಲಿ ಅಸಡ್ಡೆ ನೀತಿ ಅನುಸರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಶುಕ್ರವಾರ ನಡೆದ ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದೂರು ನೀಡಿದರು. ನಗರದ ಸಂಚಾರ ಸಮಸ್ಯೆಯನ್ನು ಸುಧಾರಿಸಲು ಟ್ರಾಫಿಕ್‌ ಪೊಲೀಸರು ಕ್ರಮ ಆರಂಭಿಸಿದ್ದು, ಅದನ್ನು ಮುಂದು ವರಿ ಸಲಾಗುವುದು ಎಂದು ಸಾರ್ವ ಜನಿಕರ ಕರೆಗಳನ್ನು ಸ್ವೀಕರಿಸಿ ಉತ್ತರಿಸಿದ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದರು.

Advertisement

ದೂರುಗಳಿದ್ದರೆ ವಾಟ್ಸಪ್‌ಗೆ ಕಳುಹಿಸಿ
ಸಾರ್ವಜನಿಕರು ತಮ್ಮ ದೂರುಗಳನ್ನು ವಾಟ್ಸಪ್‌ ಮೂಲಕ ಪೊಲೀಸರ ಗಮನಕ್ಕೆ ತನ ಬಹುದು. ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಶುಕ್ರವಾರದ ಫೋನ್‌ ಇನ್‌ ಕಾರ್ಯಕ್ರಮವನ್ನೇ ಕಾಯುವ ಆಗತ್ಯವಿಲ್ಲ, ಯಾವಾಗ ಬೇಕಾದರೂ ವಾಟ್ಸಪ್‌ ನಂಬರ್‌ 9480802300 ನಂಬ್ರಕ್ಕೆ ಕಳುಹಿಸ ಬಹುದು ಎಂದರು.

ಮಣ್ಣಗುಡ್ಡೆ ಪರಿಸರದಲ್ಲಿ ಫುಟ್‌ಪಾತ್‌ನಲ್ಲಿ ಹೂವು ಮಾರುವವರು ವ್ಯಾಪಾರ ಮಾಡುತ್ತಿದ್ದು, ಪಾದಚಾರಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ದೂರಿ ದರು. ಹೂವು ಮಾರಾಟಗಾರರನ್ನು ಫುಟ್‌ ಪಾತ್‌ನಿಂದ ತೆರವು ಮಾಡಲು ಕ್ರಮ ವಹಿಸಲಾಗುವುದು ಎಂದು ಕಮಿಷನರ್‌ ತಿಳಿಸಿದರು.

ಕುತ್ತಾರುಪದವು ಶಾಲೆಯ ಸಮೀಪ ಹೊಸ ತಾಗಿ ಬಾರ್‌ ಆರಂಭಗೊಂಡಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಕಮಿ ಷನರ್‌ ಸಂದೀಪ್‌ ಪಾಟೀಲ್‌, ಈ ಬಗ್ಗೆ ಅಬಕಾರಿ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.

ಕೊಟ್ಟಾರ ಚೌಕಿಯಿಂದ ಮಹೀಂದ್ರಾ ಶೋರೂಂ ತನಕ ರಸ್ತೆಯಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದೆ. ರಾತ್ರಿ ನಿದ್ರಿಸಲು ಬಿಡುವುದಿಲ್ಲ; ಕಸವನ್ನು ಎಲ್ಲೆಂದರಲ್ಲಿ ಹಾಕಿ ಚೆಲ್ಲಾಪಿಲ್ಲಿ ಮಾಡುತ್ತಿವೆ ಎಂದು ನಾಗರಿಕರೊಬ್ಬರು ದೂರಿದರು. ಈ ಬಗ್ಗೆ ಮಹಾನಗರ ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದು ಕಮಿಷನರ್‌ ತಿಳಿಸಿದರು.

Advertisement

ತೊಕ್ಕೊಟ್ಟು ಮೇಲ್ಸೇತುವೆ: ಸಮಸ್ಯೆ ಬಗ್ಗೆ ಅಧ್ಯಯನ
ತೊಕ್ಕೊಟ್ಟು ಮೇಲ್ಸೇತುವೆ ಬಳಿ ಉಳ್ಳಾಲ ತಿರುವು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಇದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಅಹವಾಲು ಹೇಳಿಕೊಂಡರು. ಅಲ್ಲಿನ ಸಮಸ್ಯೆ ನಿವಾರಿಸುವ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಕಮಿಷನರ್‌ ತಿಳಿಸಿದರು.

ಇದು 117ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 23 ಕರೆಗಳು ಬಂದವು. ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್‌, ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್‌ ಇನ್‌ಸ್ಪೆಕ್ಟರ್‌ಗಳಾದ ಶಿವಪ್ರಕಾಶ್‌, ಅಶೋಕ್‌ ಕುಮಾರ್‌ ಮತ್ತು ಸಿ.ಎನ್‌. ದಿವಾಕರ್‌, ಎಎಸ್‌ಐ ಪಿ. ಯೋಗೇಶ್ವರನ್‌, ಹೆಡ್‌ಕಾನ್‌ಸ್ಟೆಬಲ್‌ ಪುರುಷೋತ್ತಮ ಮೊದ ಲಾ ದ ವರು ಉಪಸ್ಥಿತರಿದ್ದರು.

ಪ್ರಮುಖ ದೂರುಗಳು
ಸುರತ್ಕಲ್‌ ಜಂಕ್ಷನ್‌ನಲ್ಲಿ ಕಾಂಪ್ಲೆಕ್ಸ್‌ ಒಂದರ ಬಳಿ ವಾಹನಗಳನ್ನು ಅಡ್ಡಾ ದಿಡ್ಡಿ ನಿಲ್ಲಿಸಿ ಅಲ್ಲಿರುವ ಮನೆಗಳ ಮಂದಿಗೆ ಹೊರಗೆ ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ.

 ಬೈಕಂಪಾಡಿಯಲ್ಲಿ ಯು- ಟರ್ನ್ ಇರುವ ಕಡೆ ರಸ್ತೆಯಲ್ಲಿ ಗುಂಡಿಗಳಿದ್ದು, ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ.

ಬೈಕಂಪಾಡಿ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ರಸ್ತೆ ಬದಿ ಉದ್ದಕ್ಕೆ 50- 60ರಷ್ಟು ಲಾರಿಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ತಡೆ ಉಂಟಾಗಿದೆ.

ಸುರತ್ಕಲ್‌ನ ಎನ್‌ಐಟಿಕೆ, ರಾಘವೇಂದ್ರ ಮಠ ಮತ್ತು ಹೊನ್ನಕಟ್ಟೆ ಜಂಕ್ಷನ್‌ನಲ್ಲಿದ್ದ ಬಸ್‌ ಶೆಲ್ಟರ್‌ಗಳನ್ನು ತೆರವು ಮಾಡಿದ್ದು, ಬಸ್‌ಗಳು ರಸ್ತೆ ಮಧ್ಯ ನಿಲ್ಲುತ್ತವೆ.

 ಬೈಕಂಪಾಡಿಯಿಂದ ಕುಳಾಯಿ ತನಕ, ಹೊನ್ನಕಟ್ಟೆಯಿಂದ ಸುರತ್ಕಲ್‌ ತನಕ ಬೀದಿ ದೀಪ ಉರಿಯುತ್ತಿಲ್ಲ.

 ಹಳೆಯಂಗಡಿಯಲ್ಲಿ ರೈಲ್ವೇ ಗೇಟ್‌ ಬಳಿ ರಸ್ತೆಯಲ್ಲಿ ಹೊಂಡ ನಿರ್ಮಾಣ ಆಗಿದ್ದು, ವಾಹನ ಸಂಚಾರ ದುಸ್ತರವಾಗಿದೆ.

 ಬೆಂದೂರ್‌ನ ಕುಲಾಸೊ ಆಸ್ಪತ್ರೆ ಬಳಿ ಇದ್ದ ರಸ್ತೆ ಹಂಪ್‌ ನವೀಕರಿಸಬೇಕು.

ಕಿನ್ನಿಗೋಳಿಯಲ್ಲಿ ಮುಖ್ಯ ರಸ್ತೆ ವಿಸ್ತರಣೆ ಮಾಡಿದ ಬಳಿಕ ಎರಡೂ ಬದಿ ವಾಹನ ನಿಲುಗಡೆ ಮಾಡಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ.

 ಮಣ್ಣಗುಡ್ಡೆ ದುರ್ಗಾ ಮಹಲ್‌ ಬಳಿ ರಸ್ತೆಗೆ ರಿಫ್ಲೆಕ್ಟರ್‌ ಬೇಕು.

 ದೇರಳಕಟ್ಟೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಅಲ್ಲಿ ಹಂಪ್‌ ನಿರ್ಮಾಣ ಮಾಡ ಬೇಕು.

Advertisement

Udayavani is now on Telegram. Click here to join our channel and stay updated with the latest news.

Next