Advertisement
-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಹೆಬ್ಟಾಳ ಪಶುವೈದ್ಯಕೀಯ ಕಾಲೇಜು ಬಳಿಯ ಎರಡೂ ಬದಿಯ ಬಸ್ ನಿಲ್ದಾಣಗಳು ಈಗ ಅಕ್ಷರಶಃ ತ್ಯಾಜ್ಯ ವಿಂಗಡಣಾ ಘಟಕವಾಗಿ ಮಾರ್ಪಟ್ಟಿವೆ. ಈ “ಘಟಕ’ಗಳಿಗೆ ಹೊಂದಿಕೊಂಡ ಕಾಲೇಜು, ಶಾಲೆ, ಇಂದಿರಾ ಕ್ಯಾಂಟೀನ್, ಪ್ರಯೋಗಾ ಲಯ, ಬೇಕರಿಗೆಲ್ಲಾ ಕಸದ ಘಾಟು ರಾಚುತ್ತಿದ್ದು, ಸ್ಥಳೀಯರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.
Related Articles
Advertisement
ನಿವಾಸಿಗಳಿಗೆ ನೊಣ, ಸೊಳ್ಳೆ ಕಾಟ; ಬೆಳಿಗ್ಗೆ ಸರ್ವಿಸ್ ರಸ್ತೆಯುದ್ದಕ್ಕೂ ಸುಮಾರು 20ಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ರಸ್ತೆಯಲ್ಲೆಲ್ಲಾ ಹಸಿಕಸದ “ಲಿಚೆಟ್’ ಹರಿಯುತ್ತಿರುತ್ತದೆ. 11ರ ನಂತರ ವಾಹನಗಳ ಸಂಖ್ಯೆ ಕಡಿಮೆಯಾದರೂ ದುರ್ವಾಸನೆ ಕಡಿಮೆ ಆಗುವುದಿಲ್ಲ. ಕನಿಷ್ಠ ಅರ್ಧ ಕಿ.ಮೀ.ವರೆಗೂ ವ್ಯಾಪಿಸುವುದರಿಂದ ಆರ್.ಟಿ. ನಗರ, ಹೆಬ್ಟಾಳ ಕ್ವಾಟ್ರಸ್ಗೆ ಇದರ ವಾಸನೆ ಹಬ್ಬುತ್ತದೆ. ರಾತ್ರಿ ಸೊಳ್ಳೆ ಮತ್ತು ನೊಣಗಳ ಕಾಟವೂ ಇದೆ. ಒಟ್ಟಾರೆಈ ತ್ಯಾಜ್ಯ ನೆಮ್ಮದಿ ಕದಡುತ್ತಿದೆ. ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಸಂಚಾರ ಪೊಲೀಸರಿಗೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಬೆಂಗಳೂರು ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ ಹಾಗೂ ಹೆಬ್ಟಾಳ ನಿವಾಸಿ ಪ್ರೊ.ರಾಮಕೃಷ್ಣ ರಾವ್ ಆರೋಪಿಸುತ್ತಾರೆ.
ಕ್ಯಾಂಟೀನ್ ಬಳಿ ಅವಕಾಶ ಸರಿ ಅಲ್ಲ : ಯಲಹಂಕದಿಂದ ನಗರಕ್ಕೆ ಆಗಮಿಸುವ ಮಾರ್ಗದಲ್ಲಿರುವ ಹೆಬ್ಟಾಳ ಪಶುವೈದ್ಯಕೀಯ ಕಾಲೇಜು ಎದುರಿನ ರಸ್ತೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ನಿತ್ಯ ತಿಂಡಿ ಮತ್ತು ಊಟಕ್ಕೆ ನೂರಾರು ಜನ ಇಲ್ಲಿನ ಇಂದಿರಾ ಕ್ಯಾಂಟೀನ್ಗೆ ಬರುತ್ತಾರೆ. ಅದರ ಪಕ್ಕದಲ್ಲೇ ತ್ಯಾಜ್ಯ ಹತ್ತಾರು ವಾಹನಗಳು ನಿಂತಿರುತ್ತವೆ. ವಾಸನೆ ಜತೆಗೆ ಆ ತ್ಯಾಜ್ಯದ ಮೇಲೆ ಕುಳಿತುಕೊಳ್ಳುವ ನೊಣ ಮತ್ತು ಸೊಳ್ಳೆಗಳು ಕ್ಯಾಂಟೀನ್ ಅಡಿಗೆ ಮೇಲೆ ಕುಳಿತುಕೊಳ್ಳಬಹುದು. ಗೊತ್ತಿಲ್ಲದೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಕ್ಯಾಂಟೀನ್ಗೆ ಬರುವ ಬಹುತೇಕರು ಕೂಲಿಕಾರ್ಮಿಕರು. ಒಂದು ದಿನ ಆರೋಗ್ಯ ಸಮಸ್ಯೆಯಿಂದ ರಜೆ ಹಾಕಿದರೂ ದಿನದ ಕೂಲಿ ಹೋಗುತ್ತದೆ. ಆದ್ದರಿಂದ ತಕ್ಷಣ ಇದನ್ನು ತೆರವುಗೊಳಿಸಬೇಕು. ಯಾವುದೇಕಾರಣಕ್ಕೂ ಇಲ್ಲಿ ತ್ಯಾಜ್ಯ ವಿಂಗಡಣೆಗೆ ಅವಕಾಶ ನೀಡಬಾರದು ಎಂದು ನಿಯಮಿತವಾಗಿ ಇಲ್ಲಿನ ಇಂದಿರಾ ಕ್ಯಾಂಟೀನ್ಗೆ ಬರುವ ಗ್ರಾಹಕ ರಾಜಾಜಿನಗರದ ನಿವಾಸಿ ರಾಜ್ ಕುಮಾರ್ ಒತ್ತಾಯಿಸುತ್ತಾರೆ.
-ವಿಜಯಕುಮಾರ ಚಂದರಗಿ