Advertisement

ಬಸ್‌ ನಿಲ್ದಾಣ ಕಟ್ಟಡ ತೆರವು ಬೇಡ

03:06 PM Feb 18, 2020 | Suhan S |

ಬೈಲಹೊಂಗಲ: ಪಟ್ಟಣದ ಸುಸಜ್ಜಿತ ಕೇಂದ್ರ ಬಸ್‌ನಿಲ್ದಾಣ ಕಟ್ಟಡವನ್ನು ಸಾರಿಗೆ ಸಂಸ್ಥೆ ತೆರವು ಮಾಡುತ್ತಿರುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಉಪವಿಭಾಗಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

Advertisement

ಇದಕ್ಕೂ ಮೊದಲು ವಿವಿಧ ಸಂಘಟನೆಗಳು ಒಂದು ಗಂಟೆ ಕಾಲ ರಸ್ತೆ ನಡೆಸಿ ಪ್ರತಿಭಟನಾ ಮೆರವಣಿಗೆ ನಡೆಸಿದವು. ಈ ವೇಳೆ ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ, ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ ಮಾತನಾಡಿ, ಹಲವು ದಶಕಗಳ ಹಿಂದೆ ನಿರ್ಮಿಸಿದ್ದ ಸಾರಿಗೆ ಸಂಸ್ಥೆ ಬಸ್‌ನಿಲ್ದಾಣವು ಸುಸಜ್ಜಿತ ಹಾಗೂ ಆಕರ್ಷಣಿಯವಾಗಿದೆ. ಈ ಕಟ್ಟಡದಲ್ಲಿರುವ ವಾಣಿಜ್ಯ ಮಳಿಗೆಗಳಿಂದ ಹಾಗೂ ನಿಲ್ದಾಣದ ಮುಂಭಾಗದಲ್ಲಿ ಅಂಟಿಕೊಂಡಿರುವ ವಾಣಿಜ್ಯ ಮಳಿಗೆಗಳಿಂದ ಲಕ್ಷಾಂತರ ರೂ. ಸಾರಿಗೆ ಸಂಸ್ಥೆಗೆ ಆದಾಯ ಬರುತ್ತಿದ್ದು,ಇಂಥ ವಾಣಿಜ್ಯ ಮಳಿಗೆಗಳನ್ನು ಸಹ ಕೆಡವಿ ಹೊಸ ಕಟ್ಟಡ ನಿರ್ಮಿಸುವ ಸಾರಿಗೆ ಸಂಸ್ಥೆಯ ನಿರ್ಧಾರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವೇಳೆ ಸಾರ್ವಜನಿಕರ ಮನವಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೈಲಹೊಂಗಲ ಬಂದ್‌ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಜಿಪಂ ಸದಸ್ಯ ಶಂಕರ ಮಾಡಲಗಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿ, ಈಗಾಗಲೇ ಸಾರಿಗೆ ಸಂಸ್ಥೆಯು ನಷ್ಟದಲ್ಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಬೈಲಹೊಂಗಲದಲ್ಲಿ ನಡೆದ ಸಭೆಯಲ್ಲೆ ಹೇಳಿದ್ದಾರೆ. 11ರಿಂದ 13 ಲಕ್ಷ ಕಿ.ಮೀ ಓಡಿರುವ ಬಸ್ಸುಗಳನ್ನು ಗುಜರಿಗೆ ಹಾಕಬೇಕೆಂಬ ಸರ್ಕಾರದ ನಿಯಮವಿದ್ದರೂ ಅದೇ ಬಸ್ಸುಗಳನ್ನು ಇನ್ನೂ ಸಾರ್ವಜನಿಕರ ಸೇವೆಯಲ್ಲಿ ಓಡಿಸುತ್ತಿರುವುದು ದುರ್ದೈವ¨ ಸಂಗತಿ ಎಂದರು.

ಈ ವೇಳೆ ರಾಜು ಭರಮಗೌಡರ, ಪರಶುರಾಮ ರಾಯಭಾಗ, ವಿಠuಲ ಹಂಪಿಹೊಳಿ, ಬಾಳಪ್ಪ ಚಳಕೊಪ್ಪ, ಅಭಿಷೇಕ ಬೋಳಣ್ಣವರ, ಶ್ರೀದೇವಿ ನಾಯ್ಕರ, ಇಸ್ಮಾಯಿಲ್‌ ಬಡೇಘರ, ಮಹ್ಮದಲಿ ಬಾಗೇವಾಡಿ, ರಾಜು ಬೋಳಣ್ಣವರ, ಫಾರೂಕ ಪಟ್ಟಿಹಾಳ, ಉಳವಪ್ಪ ಅಂಗಡಿ ಇತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next