Advertisement

ಸುಳ್ಯ -ನಾರ್ಕೋಡು- ಮಂಡೆಕೋಲು ಬಸ್‌ ಆರಂಭ 

12:39 PM Oct 05, 2018 | |

ಅಜ್ಜಾವರ : ಸುಳ್ಯ-ಕಾಂತಮಂಗಲ ಅಜ್ಜಾವರ ರಸ್ತೆಯ ಕಾಂತಮಂಗಲದಲ್ಲಿ ಸೇತುವೆ ದುರಸ್ತಿ ಹಿನ್ನೆಲೆಯಲ್ಲಿ ರಸ್ತೆ ಮುಚ್ಚಿ ಒಂದು ತಿಂಗಳಾಗುತ್ತಿದೆ. ಈ ಮಾರ್ಗದಲ್ಲಿ ವಾಹನ ಸಂಚಾರವನ್ನೂ ನಿಷೇಧಿಸಲಾಗಿದೆ. ಬದಲಿ ಮಾರ್ಗವಾದ ಸುಳ್ಯ – ನಾರ್ಕೋಡು ಮೂಲಕ ಸರಕಾರಿ ಬಸ್‌ ಸಂಚಾರ ಆರಂಭಿಸಲಾಗಿದೆ.

Advertisement

ಕಾಂತಮಂಗಲ ಸೇತುವೆ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆ ಕುರಿತಾಗಿ ಗ್ರಾಮಸ್ಥರಲ್ಲಿರುವ ಗೊಂದಲಗಳ ಕುರಿತು ಸೆ. 10ರಂದು ಉದಯವಾಣಿ ಸುದಿನ ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಸಾರಿಗೆ ಇಲಾಖೆ, ನಾರ್ಕೋಡು ಮೂಲಕ ಬಸ್‌ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಬಳಿಕ ಮಿಥುನ್‌ ಕರ್ಲಪ್ಪಾಡಿ ಸಹಿತ ಹಲವು ಗ್ರಾಮಸ್ಥರು ಸುಳ್ಯ ಡಿಪೋ ಅಧಿಕಾರಿಗಳಿಗೂ ಮನವಿ ಮಾಡಿ, ಶೀಘ್ರ ಬಸ್‌ಗಳ ಓಡಾಟ ಆರಂಭಿಸುವಂತೆ ಒತ್ತಾಯಿಸಿದ್ದರು. ಸುಳ್ಯ- ನಾರ್ಕೋಡು ರಸ್ತೆ ಹದಗೆಟ್ಟಿದ್ದರೂ ಪ್ರಯಾಣಿಕರ ಅನುಕೂಲಕ್ಕೆ ಬಸ್‌ ಸಂಚಾರ ಆರಂಭಿಸಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ದ್ವಿಚಕ್ರ ವಾಹನಗಳೂ ಈ ಮಾರ್ಗವಾಗಿ ಓಡಾಡಲು ಕಷ್ಟವಾಗುತ್ತಿದೆ. ಬಸ್‌ ಸೇವೆ ಆರಂಭಿಸಿದ್ದರಿಂದ ಸಂಚಾರಕ್ಕೆ ದುಬಾರಿ ವೆಚ್ಚ ಭರಿಸುವುದು ತಪ್ಪಿದಂತಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next