Advertisement

ಕಡಿಯಾಳಿ: ಅಂಗಡಿಗೆ ನುಗ್ಗಿದ ಬಸ್‌

09:52 AM Jul 09, 2019 | keerthan |

ಉಡುಪಿ: ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್‌ ಬಸ್ಸೊಂದು ಕಡಿಯಾಳಿಯಲ್ಲಿ ನಿಯಂತ್ರಣ ತಪ್ಪಿ ಹಾಲಿನ ಅಂಗಡಿಗೆ ಢಿಕ್ಕಿ ಹೊಡೆದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ರಸ್ತೆ ಗಡ್ಡ ಚಲಿಸಿ ಅಂಗಡಿಗೆ  ಢಿಕ್ಕಿಯಾಗುತ್ತಲೇ ಬಸ್‌ ನಿಲುಗಡೆಯಾದ ಪರಿಣಾಮ ಭಾರೀ ದುರಂತ ತಪ್ಪಿದೆ.

Advertisement

ಬೆಳಗ್ಗೆ 8 ಗಂಟೆ ಸುಮಾರಿಗೆ ಅತಿ ವೇಗದಿಂದ ಬಂದ ಬಸ್‌ ನಿಯಂತ್ರಣ ಕಳೆದುಕೊಂಡು ಎಡಬದಿಗೆ ತಿರುಗಿ ಪುಟ್‌ಪಾತ್‌ನಿಂದ ಮೇಲೇರುವ ಹಂತಕ್ಕೆ ಬಂದು ಪಕ್ಕದಲ್ಲಿದ್ದ ಮಿಲ್ಕ್ ಪಾರ್ಲರ್‌ನ ಗೋಡೆ ಮತ್ತು ಶಟರ್‌ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಪಾರ್ಲರ್‌ನ ಒಳಗೆ ಇಬ್ಬರಿದ್ದರು. ಬಸ್‌ ನುಗ್ಗುವುದನ್ನು ಗಮನಿಸಿದ ಅವರು ಅಂಗಡಿಯ ಮತ್ತಷ್ಟು ಒಳಗೆ ಓಡುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಚಾಲಕ ಶೇಖ್‌ ಮುಸ್ತಾಕ್‌ ದುಡುಕುತನ ಮತ್ತು ನಿರ್ಲಕ್ಷ  ದಿಂದ ಚಲಾಯಿಸಿ ಏಕಾಏಕಿ ಬ್ರೇಕ್‌ ಹಾಕಿದ್ದೇ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಈ ವೇಳೆ ಮಳೆಯೂ ಬರುತ್ತಿತ್ತು.

ಬಸ್ಸಿನಲ್ಲಿ 10ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದರು. ಒಂದು ವೇಳೆ ಬಸ್‌ ಎದುರಿನ ವಾಹನಗಳಿಗೆ ಢಿಕ್ಕಿ ಹೊಡೆದಿದ್ದರೆ ಅಥವಾ ಮಗುಚಿ ಬಿದ್ದಿದ್ದರೆ ಭಾರೀ ಅನಾಹುತವಾಗುವ ಸಾಧ್ಯತೆಗಳಿದ್ದವು.  “ವಾಹನವೊಂದು ಅಡ್ಡ ಬಂದ ಕಾರಣ ಚಾಲಕ ಏಕಾಏಕಿ ಬ್ರೇಕ್‌ ಹಾಕಿರುವುದಾಗಿ ತಿಳಿಸಿದ್ದಾನೆ’ ಎಂದು ಬಸ್‌ ಮಾಲಕರು ತಿಳಿಸಿದ್ದಾರೆ.

ಗೋಡೆ ಬಿರುಕು
ಘಟನೆಯಿಂದ ಅಂಗಡಿಯ ಗೋಡೆಗಳು ಬಿರುಕು ಬಿಟ್ಟಿವೆ. ಶಟರ್‌, ತಗಡುಶೀಟ್‌ ಹಾಗೂ ಸಾಮಗ್ರಿ ಹಾನಿಗೀಡಾಗಿವೆ ಎಂದು ಅಂಗಡಿ ಮಾಲಕರು ಉಡುಪಿ ನಗರ ಸಂಚಾರ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next