Advertisement

ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಬಸ್‌: ಪ್ರಯಾಣಿಕರು ಪಾರು

11:18 AM May 02, 2017 | Harsha Rao |

ಕೊಪ್ಪಳ: ತಾಲೂಕಿನ ಹಲಗೇರಿ ಸಮೀಪದಲ್ಲಿ ಖಾಸಗಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ದಿಢೀರ್‌ ಹೊತ್ತಿ
ಉರಿದ ಘಟನೆ ಸೋಮವಾರ ನಡೆದಿದ್ದು, ಬಸ್‌ನಲ್ಲಿದ್ದ 8 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಮುಂಡರಗಿಗೆ ತೆರಳುತ್ತಿದ್ದ ಗ್ರೀನ್‌ಲೈನ್‌ ಕಂಪನಿಗೆ ಸೇರಿದ ಬಸ್‌ನ ಹಿಂಭಾಗದಲ್ಲಿ ದಿಢೀರನೆ ಬೆಂಕಿ
ಕಾಣಿಸಿಕೊಂಡಿದೆ. ಚಾಲಕ ಇದನ್ನು ಗಮನಿಸದೆ ಬಸ್‌ ಚಲಾಯಿಸಿದ್ದಾನೆ. ಬಸ್‌ ಹಿಂದೆ ಬೈಕ್‌ನಲ್ಲಿ ತೆರಳುತ್ತಿದ್ದ
ವ್ಯಕ್ತಿಯೊಬ್ಬ ಬಸ್‌ಗೆ ಬೆಂಕಿ ಹೊತ್ತಿಕೊಂಡ ಮಾಹಿತಿಯನ್ನು ಚಾಲಕನಿಗೆ ಸನ್ನೆ ಮೂಲಕ ತಿಳಿಸಿದ್ದಾನೆ. ಇದನ್ನು
ಗಮನಿಸಿದ ಚಾಲಕ ಕೂಡಲೇ ಬಸ್‌ನಿಂದ ಕೆಳಗಿಳಿದು ನೋಡುವಷ್ಟರಲ್ಲಿ ಬೆಂಕಿ ಬಸ್‌ ತುಂಬ ಆವರಿಸಿಕೊಂಡಿದೆ.

Advertisement

ಬೆಂಕಿಯ ಝಳ ಅರಿತ 8 ಪ್ರಯಾಣಿಕರೂ ಕೂಡಲೇ ಬಸ್‌ನಿಂದ ಕೆಳಗಿಳಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಪ್ರಯಾಣಿಕರ ಬೆಲೆ ಬಾಳುವ ಬಟ್ಟೆಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ತಂಡ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಬಸ್‌ ಸಂಪೂರ್ಣ ಸುಟ್ಟು ಹೋಗಿತ್ತು. ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next