Advertisement

ಕೂಡ್ಲಿಗಿ:ಬಸ್‌ಗೆ ಕಂಟೇನರ್‌ ಡಿಕ್ಕಿ,16 ಮಂದಿಗೆ ಗಂಭೀರ ಗಾಯ 

11:34 AM Jul 20, 2017 | Team Udayavani |

ಕೂಡ್ಲಿಗಿ: ಇಲ್ಲಿನರಾಷ್ಟ್ರೀಯ ಹೆದ್ದಾರಿ 13 ರ ಹುಲಿಕೆರೆ ಗ್ರಾಮದಲ್ಲಿ ಕಂಟೇನರ್‌  ಲಾರಿಯೊಂದು  ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿ 16 ಮಂದಿ ಗಂಭೀರವಾಗಿ ಗಾಯಗೊಂಡಿರುವ ಅವಘಡ ಗುರುವಾರ ಬೆಳಗ್ಗೆ ಸಂಭವಿಸಿದೆ. 

Advertisement

ಅಪಘಾತದ ತೀವ್ರತೆಗೆ ಕಂಟೇನರ್‌ ಚಾಲಕನ 2 ಕಾಲುಗಳು ತುಂಡಾಗಿವೆ. ಬಸ್‌ನಲ್ಲಿದ್ದ 15 ಮಂದಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಖಾನಾ ಹೊಸಹಳ್ಳಿ ಪೊಲೀಸ್‌ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next