Advertisement

ಬಸ್- ಗ್ಯಾಸ್ ಟ್ಯಾಂಕರ್ ನಡುವೆ ಭೀಕರ ಅಪಘಾತ: ಏಳು ಜನರು ಸಾವು, 25 ಮಂದಿಗೆ ಗಾಯ

12:40 PM Dec 16, 2020 | keerthan |

ಸಂಭಾಲ್: ಬಸ್ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿ 25 ಜನರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ನಡೆದಿದೆ.

Advertisement

ಇಂದು ಬೆಳಿಗ್ಗೆ ಈ ಭೀಕರ ಅಪಘಾತ ನಡೆದಿದ್ದು, ಮಂಜು ಕವಿದಿದ್ದ ಕಾರಣ ದಾರಿ ಕಾಣದೆ ಟ್ಯಾಂಕರ್ ಚಾಲಕ ಬಸ್ ಗೆ ಗುದ್ದಿದ್ದಾನೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದೆ.

ಇದನ್ನೂ ಓದಿ:ಉ.ಪ್ರದೇಶದ ಮೊದಲ ಲವ್ ಜಿಹಾದ್ ಪ್ರಕರಣಕ್ಕೆ ತಿರುವು: ಯುವತಿಗೆ ಗರ್ಭಪಾತ! ಕಾಯ್ದೆಗೆ ಹಿನ್ನಡೆ

ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಆಲಿಘಡ್ ಡಿಪೊಗೆ ಸೇರಿದ ಬಸ್ ಇದಾಗಿದೆ. ಆಗ್ರಾ- ಮೊರಾದಾಬಾದ್ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಎರಡೂ ವಾಹನಗಳು ನಜ್ಜುಗುಜ್ಜಾಗಿದೆ.

Advertisement

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next