Advertisement

ಬಸ್- ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

01:36 PM Oct 21, 2019 | keerthan |

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ದೊಡ್ಡ ಉರ್ಳಾತಿ ಕ್ರಾಸ್ ಬಳಿ ಬೈಕಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

Advertisement

ಚನ್ನಗಾನಹಳ್ಳಿ ಕಡೆಯಿಂದ ಚಳ್ಳಕೆರೆ ಮಾರ್ಗವಾಗಿ ಹೊಗುತ್ತಿದ್ದ ಬೈಕ್ ಗೆ ಬಸ್ ಡಿಕ್ಕಿಯಾಗಿ ಜಗದೀಶ್ (26) ಸ್ಥಳದಲ್ಲಿ ಸಾವನ್ನಿಪ್ಪಿದ್ದಾನೆ.

ಶ್ರೀನಿವಾಸ್ (28) ಗಂಭೀರ ಗಾಯಗೊಂಡಿದ್ದು, ಚಳ್ಳಕೆರೆ ಆಸ್ವತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಬಸ್ ಚಾಲಕನ ಅಜಾಗರೂಕತೆ ಹಾಗೂ ಓವರ್ ಸ್ವೀಡ್ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಜಗದೀಶ್ (26) ಕಾನೂನು ಪದವೀಧರನಾಗಿದ್ದು ಇಂದು ವಕೀಲ ವೃತ್ತಿಯನ್ನು ಆರಂಭಿಸಲು ಚಿತ್ರದುರ್ಗಕ್ಕೆ ಬರುವಾಗ ದುರ್ಘಟನೆ ನಡೆದಿದೆ.

Advertisement

ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next