Advertisement

ಬಂಟರ ಸಂಘ ಪುಣೆ ಶಿವಾಜಿ ಜಯಂತಿ ಆಚರಣೆ

03:26 PM Feb 23, 2019 | |

ಪುಣೆ: ಬಂಟರ ಸಂಘ ಪುಣೆಯ  ವತಿಯಿಂದ ಫೆ. 19ರಂದು ಬಾಣೇರ್‌ನಲ್ಲಿರುವ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಕೇಂದ್ರ ಬಂಟರ ಭವನದ ಆವರಣದಲ್ಲಿ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು.

Advertisement

ಭವನದ ಆವರಣದಲ್ಲಿರುವ  ಶಿವಾಜಿ ಮಹಾರಾಜರ ಪ್ರತಿಮೆಗೆ ಹಾಲಿನ ಅಭಿಷೇಕವನ್ನು ಮಾಡಿ ಸಂಘದ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಇವರು ಹಾರಾರ್ಪಣೆ ಮಾಡುವ ಮೂಲಕ  ಶಿವಾಜಿ ಜಯಂತಿಯನ್ನು ಆಚರಿಸಿ, ಶಿವಾಜಿಯ ಸಿದ್ಧಿ-ಸಾಧನೆಗಳನ್ನು ಮೆಲುಕು ಹಾಕಿದರು.

ಈ ಸಂದರ್ಭ ಸಂಘದ ಜೊತೆ ಕಾರ್ಯದರ್ಶಿ ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್‌ರಾಜ್‌ ಶೆಟ್ಟಿ, ಯುವ ವಿಭಾಗದ ಕೋಶಾಧಿಕಾರಿ ವಿಶಾಲ್‌ ಶೆಟ್ಟಿ, ಉಪಕಾರ್ಯಾಧ್ಯಕ್ಷರಾದ ಉದಯ್‌ ಶೆಟ್ಟಿ ಮತ್ತು ಪ್ರಫುಲ್‌ ಶೆಟ್ಟಿ, ಕ್ರೀಡಾ ಸಮಿತಿಯ  ಕಾರ್ಯಾಧ್ಯಕ್ಷ ಅಕ್ಷಯ್‌ ಶೆಟ್ಟಿ, ಸದಸ್ಯರಾದ ಧೀರಜ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.    

 ಚಿತ್ರ-ವರದಿ :ಕಿರಣ್‌ ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next