Advertisement

ಉಡುಪಿ ಜಿಲ್ಲೆಯಲ್ಲಿ ಹಕ್ಕುಪತ್ರ ವಿತರಣೆ: ಅಶೋಕ್‌

11:13 PM Feb 15, 2023 | Team Udayavani |

ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ನಮೂನೆ -50ರಡಿ 11,916 ಹಕ್ಕುಪತ್ರ ನೀಡಲಾಗಿದೆ ಹಾಗೂ ನಮೂನೆ -53ರಡಿ 13,294 ಅರ್ಜಿಗಳನ್ನು ಮಂಜೂರು ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

Advertisement

ಕಾಂಗ್ರೆಸ್‌ನ ಕೆ. ಹರೀಶ್‌ ಕುಮಾರ್‌ ಅವರ ಪ್ರಶ್ನೆಗೆ ಲಿಖೀತ ಉತ್ತರ ಕೊಟ್ಟಿರುವ ಸಚಿವರು, ಉಡುಪಿ ಜಿಲ್ಲೆಯಲ್ಲಿ ನಮೂನೆ -50ರಡಿ 50,358 ಅರ್ಜಿಗಳು ಸಲ್ಲಿಕೆಯಾಗಿದ್ದು, 11,916 ಹಕ್ಕುಪತ್ರಗಳನ್ನು ನೀಡಲಾಗಿದೆ. ಅದೇ ರೀತಿ ನಮೂನೆ-53ರಡಿ 58,382 ಅರ್ಜಿಗಳು ಸಲ್ಲಿಕೆಯಾಗಿದ್ದು, 13,294 ಅರ್ಜಿಗಳನ್ನು ಮಂಜೂರು ಮಾಡಲಾಗಿದೆ. 35,066 ಅರ್ಜಿಗಳು ತಿರಸ್ಕರಿಸಲಾಗಿದ್ದು 10,022 ಅರ್ಜಿಗಳು ಬಾಕಿ ಇವೆ ಎಂದು ಮಾಹಿತಿ ನೀಡಿದ್ದಾರೆ.

ರಾ.ಹೆ-66: ಸಂಚಾರ ದಟ್ಟಣೆ ತಗ್ಗಿಸಲು ಕ್ರಮ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಖಾಂತರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-66 ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತದೆ. ಹೆದ್ದಾರಿ ಕಿ.ಮೀ 10.00ರಲ್ಲಿ ಬಲಭಾಗದಿಂದ ಉಲ್ಲಾಳಕ್ಕೆ ಸೇರುವ ರಸ್ತೆಯ ಭಾಗವನ್ನು ಪೊಲೀಸ್‌ ಇಲಾಖೆಯಿಂದಾಗಲಿ ಅಥವಾ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದಾಗಲಿ ಕಪ್ಪು ಸ್ಥಳವೆಂದು ಗುರುತಿಸಿಲ್ಲ. ಅದಾಗ್ಯೂ, ಈ ಭಾಗದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ಅಪಘಾತಗಳನ್ನು ತಡೆಯುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಿಯಾಯಿತಿ ಕರಾರಿನ ಅನ್ವಯ ಅಭಿವೃದ್ಧಿಪಡಿಸಿ ಸೈನ್‌ ಬೋರ್ಡ್‌, ರೋಡ್‌ ಮಾರ್ಕಿಂಗ್‌ ಮತ್ತಿತರೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜೆಡಿಎಸ್‌ನ ಬಿ.ಎಂ. ಫಾರೂಕ್‌ ಅವರ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಲಿಖಿತ ಉತ್ತರ ನೀಡಿದ್ದಾರೆ.

ಅದೇ ರೀತಿ ಪಿ.ಪಿ.ಟಿ ಜಂಕ್ಷನ್‌ ಬಳಿ ಹೆಚ್ಚಿನ ವಾಹನ ಸಂಚಾರ ದಟ್ಟಣೆ ಇರುವುದ ಸರ್ಕಾರದ ಗಮನಕ್ಕೆ ಬಂದಿದೆ. ಅದರಂತೆ, ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಕ್ಷಣಾತ್ಮಕ ತಡೆಗೋಡೆಯನ್ನು ಕಿ.ಮೀ 374.20ರಲ್ಲಿ ಹಾಗೂ ಕಿ.ಮೀ 373.00ರಿಂದ 375.60ವರೆಗೆ ಸರ್ವಿಸ್‌ ರಸ್ತೆ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ನಂತೂರು ಜಂಕ್ಷನ್‌ ಬಳಿ 375.30ರಲ್ಲಿ ವೆಹಿಕುಲರ್‌ ಒವರ್‌ ಪಾಸ್‌ ನಿರ್ಮಿಸಲು ಟೆಂಡರ್‌ ಕರೆಯಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ್‌ ಅವರ ಬಿ.ಎಂ. ಫಾರೂಕ್‌ ಅವರ ಮತ್ತೂಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

ಅಳಿವೆ ಬಾಗಿಲಿನಲ್ಲಿ ಹೂಳೆತ್ತಲು 247 ಲಕ್ಷ ವೆಚ್ಚ
ಬೆಂಗಳೂರು: ಮೀನುಗಾರಿಕಾ ದೋಣಿಗಳು ಮತ್ತು ವಾಣಿಜ್ಯ ನೌಕೆಗಳಿಗೆ ಅಗತ್ಯವಿರುವ ಆಳವನ್ನು ಉಲ್ಲಾಳದ “ಅಳಿವೆ ಬಾಗಿಲಿ’ನಲ್ಲಿ ಕಾಯ್ದುಕೊಳ್ಳಲು ಕಳೆದ 7 ವರ್ಷಗಳಲ್ಲಿ 3 ಬಾರಿ 247 ಲಕ್ಷ ರೂ. ಮೊತ್ತದಲ್ಲಿ ಹೂಳೆತ್ತಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ತಿಳಿಸಿದ್ದಾರೆ.

Advertisement

ವಿಧಾನಪರಿಷತ್ತಿನ ಜೆಡಿಎಸ್‌ ಸದಸ್ಯ ಬಿ.ಎಂ. ಫಾರೂಕ್‌ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿರುವ ಸಚಿವರು, 2016-17ರಲ್ಲಿ 99,50 ಲಕ್ಷ, 2019-20ರಲ್ಲಿ 100 ಲಕ್ಷ, 2022-23ನೇ ಸಾಲಿನಲ್ಲಿ 100 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತಲಾಗಿದೆ. ಇದಲ್ಲದೆ, ಸಾಗರಮಾಲಾ ಯೋಜನೆಯಡಿ ಮಂಗಳೂರು ಹಳೇ ಬಂದರಿನ ನ್ಯಾವಿಗೇಷನ್‌ ಚಾನಲ್‌ನ ಸಂಪೂರ್ಣ 4.00 ಮೀ ಉದ್ದವನ್ನು -7.00 ಮೀಟರ್‌ ಆಳಕ್ಕೆ ಸಮಗ್ರವಾಗಿ ಹೂಳೆತ್ತಲು 29 ಕೋಟಿ ರೂ. ಮಂಜೂರು ಮಾಡಲಾಗಿದೆ.

ಮಂಗಳೂರು ಹಳೆ ಬಂದರಿನ ಸಾಮರ್ಥಯ ಹೆಚ್ಚಿಸಲು ಸಾಗರಮಾಲಾ ಯೋಜನೆಯಡಿ ಕೋಸ್ಟಲ್‌ ಬರ್ತ್‌ ನಿರ್ಮಾಣಕ್ಕೆ 65 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. 65 ಕೋಟಿ ರೂ. ವೆಚ್ಚದಲ್ಲಿ ಲಕ್ಷದ್ವೀಪದೊಂದಿಗೆ ಐತಿಹಾಸಿಕ ವ್ಯಾಪಾರ ಒಪ್ಪಂದಗಳನ್ನು ಪುನರುಜ್ಜೀವನಗೊಳಿಸಲು ಪೂರಕ ಮೂಲಸೌಕರ್ಯಗಳನ್ನು ಹಾಗೂ ಟರ್ಮಿನಲ್‌ ಸಹಿತ ಸಮರ್ಪಿತ ಜಟ್ಟಿ ಅಭಿವೃದ್ಧಿ ಕಾಮಗಾರಿ ಮಂಜೂರು ಆಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

3ನೇ ಹಂತದ ವಿಸ್ತರಣೆ ಪರಿಶೀಲನೆ:
ಬೆಂಗಳೂರು: ಮಂಗಳೂರಿನ ದಕ್ಕೆಯಲ್ಲಿ ಅಳಿವೆ ಬಾಗಿಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಹೂಳೆತ್ತುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿತ್ತು. ಕಳೆದ 6 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ 2022-23ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ 390 ಲಕ್ಷ ರೂ. ಅನುದಾನ ನೀಡಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು ಟೆಂಡರ್‌ದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಮಂಗಳೂರು ಬಂದರಿನ 3ನೇ ಹಂತದ ವಿಸ್ತರಣೆಯ ಉಳಿಕೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಕಾಂಗ್ರೆಸ್‌ನ ಕೆ. ಹರೀಶ್‌ ಕುಮಾರ್‌ ಅವರ ಪ್ರಶ್ನೆಗೆ ಸಚಿವ ಎಸ್‌. ಅಂಗಾರ ಲಿಖೀತ ಉತ್ತರ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next