Advertisement

Budget ಹಲ್ವಾ ದಲಿತರು, ಒಬಿಸಿಗಳಿಗೇಕಿಲ್ಲ? ರಾಹುಲ್‌ ಪ್ರಶ್ನೆಗೆ ತಲೆ ಚಚ್ಚಿಕೊಂಡ ನಿರ್ಮಲಾ!

11:57 PM Jul 29, 2024 | Team Udayavani |

ಹೊಸದಿಲ್ಲಿ: ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನರಿಗೆ ಬಜೆಟ್‌ನ ಹಲ್ವಾ ಏಕಿಲ್ಲ. ಕೇಂದ್ರ ಬಜೆಟನ್ನು ಏಕಸ್ವಾಮ್ಯ ಮಾಡಲು ಹೊರಟಿದೆ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೋಮವಾರ ವಾಗ್ಧಾಳಿ ನಡೆಸಿದ್ದಾರೆ.

Advertisement

ಬಜೆಟ್‌ ಮೇಲಿನ ಚರ್ಚೆ ಯಲ್ಲಿ ಮಾತನಾಡಿದ ಅವರು, ಹಲ್ವಾ ವಿತರಣೆ ಕಾರ್ಯ ಕ್ರಮದ ಫೋಟೋವನ್ನು ಪ್ರದರ್ಶಿಸಿ, ಇದರಲ್ಲಿ ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಅಧಿಕಾರಿಗಳು ಏಕಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಗುತ್ತಾ ತಲೆ ಚಚ್ಚಿಕೊಂಡಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ಫೋಟೋ ಪ್ರದರ್ಶನಕ್ಕೆ ಸ್ಪೀಕರ್‌ ಬಿರ್ಲಾ ವಿರೋಧ ವ್ಯಕ್ತಪಡಿಸಿದ ಕಾರಣ ಕ್ಷಮೆ ಕೇಳಿದ ರಾಹುಲ್‌, ಈ ಸರಕಾರ ಫೋಟೋಗೇಕೆ ಹೆದರಿಕೊಳ್ಳುತ್ತದೆ ಎಂದು ಪ್ರಶ್ನಿಸಿದರು. ಅಲ್ಲದೇ ಬಜೆಟನ್ನು ಏಕಸ್ವಾಮ್ಯಗೊಳಿಸುವ ಮೂಲಕ ಕೇಂದ್ರ ಸರಕಾರ ಚಕ್ರವ್ಯೂಹವನ್ನು ನಿರ್ಮಿಸಲು ಹೊರಟಿದೆ. ಇದು ಅಪಾಯಕಾರಿ ಯಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ನೋಟು ಅಮಾನ್ಯೀಕರಣ, ತೆರಿಗೆ ಭಯೋತ್ಪಾದನೆ ಯಂತಹ ವಿಷಯಗಳನ್ನು ಪ್ರಸ್ತಾಪಿಸಿಲ್ಲ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next