Advertisement

ಬಿಎಸ್‌ವೈ ರಾಜೀನಾಮೆಗೆ ಅತಿಯಾದ ಭ್ರಷ್ಟಾಚಾರ ಕಾರಣ : ಮಾಜಿ ಸಿಎಂ ಸಿದ್ದರಾಮಯ್ಯ

08:28 PM Jul 26, 2021 | Team Udayavani |

ಬಾಗಲಕೋಟೆ : ಯಡಿಯೂರಪ್ಪ ಅವರ ರಾಜೀನಾಮೆಗೆ ಅತಿಯಾದ ಭ್ರಷ್ಟಾಚಾರ ಹಾಗೂ ಹೆಚ್ಚು ವಯಸ್ಸಾಗಿರುವುದೇ ಕಾರಣ ಎಂದು ಮಾಜಿ ಸಿಎಂ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಬಾದಾಮಿ ತಾಲೂಕಿನ ಮಲಪ್ರಭಾ ನದಿ ಪ್ರವಾಹ ಚೋಳಚಗುಡ್ಡ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ಯಡಿಯೂರಪ್ಪ ಅವರದ್ದು ಭ್ರಷ್ಟ ಸರ್ಕಾರ ಎಂದು ಕೇಂದ್ರಕ್ಕೂ ಗೊತ್ತಿತ್ತು. ಇಡೀ ದೇಶದ ಜನರಿಗೂ ಇದು ತಿಳಿದಿತ್ತು. ನಾವು ಶೇ.30ರಷ್ಟು ಭ್ರಷ್ಟ ಸರ್ಕಾರ ಅಂತ ಕರೆಯುತ್ತಿದ್ದೇವು. ಎಲ್ಲ ಯೋಜನೆಗಳಲ್ಲೂ ಶೇ.30 ರಷ್ಟು ವಸೂಲಿ ಮಾಡುತ್ತಿದ್ದು. ಬಹುಶಃ ರಾಜೀನಾಮೆಗೆ ಇದುವೇ ಕಾರಣ ಆಗಿರಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಈ ಬಗ್ಗೆ ನಾನು ವಿಚಾರವೂ ಮಾಡಿಲ್ಲ ಎಂದರು.

ಕಾರ್ಗಿಲ್ ವೀರಯೋಧನಿಗೆ ಗೌರವ :

ಕಾರ್ಗಿಲ್ ಯುದ್ಧದಲ್ಲಿ ಮೊದಲ ವೀರಮರಣ ಅಪ್ಪಿದ ಬಾದಾಮಿ ತಾಲೂಕು ಚೋಳಚಗುಡ್ಡ ಗ್ರಾಮದ ವೀರಯೋಧ ಶಿವಬಸಯ್ಯ ಕುಲಕರ್ಣಿ ಅವರ ಸ್ಮಾರಕಕ್ಕೆ ಮಾರ್ಲಾಪಣೆ ಮಾಡಿ ಗೌರವ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next