Advertisement

ಎಚ್‌ಡಿಕೆ ಮೇಲೆ ದ್ವೇಷ ಸಾಧಿಸಿದ ಬಿಎಸ್‌ವೈ : ಅನಿತಾ ಕುಮಾರಸ್ವಾಮಿ

09:59 AM Mar 06, 2020 | sudhir |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನನ್ನ ಪತಿ ಕುಮಾರಸ್ವಾಮಿಯವರ ಮೇಲೆ ದ್ವೇಷ ಸಾಧಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಘೋಷಿಸಿದ್ದ ಬಡವರ ಬಂಧು, ಸಾಲಮನ್ನಾದ ವಿಚಾರ ಬಜೆಟ್‌ನಲ್ಲಿ ಪ್ರಸ್ತಾಪವೇ ಮಾಡಿಲ್ಲ ಎಂದು ಜೆಡಿಎಸ್‌ ಶಾಸಕಿ ಅನಿತಾ ಕುಮಾರಸ್ವಾಮಿ ದೂರಿದ್ದಾರೆ.

Advertisement

ಬಜೆಟ್‌ ಕುರಿತು ಪ್ರತಿಕ್ರಿಯಿಸಿದ ಅವರು, ಬಡವರ ಬಂಧು ಯೋಜನೆ ಕೈ ಬಿಡುವ ಮುನ್ಸೂಚನೆ ನೀಡಲಾಗಿದೆ. ರೈತರ ಸಾಲ ಮನ್ನಾ ಮುಂದುವರಿಸಿಕೊಂಡು ಹೋಗಬೇಕಿತ್ತು ಎಂದು ಹೇಳಿದರು.

ಬಜೆಟ್‌ನಲ್ಲಿ ನನಗೆ ಯಾವುದೇ ಗುಡ್‌ ಅನ್ನಿಸುವ ಅಂಶ ಇಲ್ಲ. ಇದೊಂದು ನೀರಸ ಬಜೆಟ್‌.ಯಾವುದೇ ವರ್ಗದವರಿಗೂ ಆನುಕೂಲ ಆಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next