Advertisement

ಬಿಜೆಪಿ ಪ್ರಣಾಳಿಕೆ ರಿಲೀಸ್‌;ರೈತರಿಗೆ,ಸ್ತ್ರೀಯರಿಗೆ ಭರಪೂರ ಘೋಷಣೆ 

10:53 AM May 04, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಏರಲೇಬೇಕು ಎಂದು ಭಾರೀ ಹೋರಾಟ ನಡೆಸುತ್ತಿರುವ ಬಿಜೆಪಿ ಶುಕ್ರವಾರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರೈತರು , ಮಹಿಳೆಯರಿಗೆ ಭರಪೂರ ಆಶ್ವಾಸನೆಗಳನ್ನು ಘೋಷಿಸಿದೆ. 

Advertisement

ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅವರು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. 

ಪ್ರಣಾಳಿಕೆಯ ಪ್ರಮುಖ ಘೋಷಣೆಗಳು ಹೀಗಿವೆ…

ರಾಷ್ಟ್ರೀಕೃತ ಬ್ಯಾಂಕ್‌ನ 1 ಲಕ್ಷ ರೂಪಾಯಿ ವರೆಗಿನ ಕೃಷಿ ಸಾಲ ಮನ್ನಾ 

ನೇಕಾರರ 1 ಲಕ್ಷ ರೂಪಾಯಿ ಸಾಲ ಮನ್ನಾ 

Advertisement

ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ ಫೋನ್‌, ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ 

ವಿವಾಹ ಮಂಗಳ ಯೋಜನೆ ಯಲ್ಲಿ  ಬಡ ಯುವತಿಗೆ 25,000 ರೂ ಮತ್ತು 2.5 ಗ್ರಾಂ ಚಿನ್ನಾಭರಣ 

 ಭಾಗ್ಯ ಲಕ್ಷ್ಮೀ  ಯೋಜನೆ 1 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ 

ಸ್ತ್ರೀ ಶಕ್ತಿ ಸಂಘಟನೆಯ ಸದಸ್ಯೆಯರಿಗೆ 2 ಲಕ್ಷ ದ ವರೆಗೆ 1 % ಬಡ್ಡಿ  ಸಾಲ 

10 ಸಾವಿರ ಕೋಟಿ ಸ್ತ್ರೀ ಉನ್ನತಿ ನಿಧಿ 

ರಾಜ್ಯದ ರೈತರಿಗೆ ಚೀನಾ, ಜಪಾನ್‌ ಪ್ರವಾಸ 

ಕೆಎಂ ಎಫ್ ಉತ್ತೇಜನಕ್ಕಾಗಿ  3 ಸಾವಿರ ಕೋಟಿ ಮೀಸಲು 

100 ದಿನಗಳ ಒಳಗಾಗಿ ಕಾಂಗ್ರೆಸ್‌ ಸರ್ಕಾರದ ಆರ್ಥಿಕ ವೈಫ‌ಲ್ಯದ ಕುರಿತು ಶ್ವೇತಪತ್ರ 

ಎಸಿಬಿ ರದ್ದು 

ಮುಖ್ಯಮಂತ್ರಿ ಕಚೇರಿ ಅಡಿಯಲ್ಲಿ 24* 7 ಭ್ರಷ್ಟಾಚಾರ ವಿರೋಧಿ ಸಹಾಯವಾಣಿ 

ಮರಳು, ಭೂ,ಗಣಿ ಮಾಫಿಯಾ ಶಾಶ್ವತ ತಡೆ 

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ 

ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಗೆ ಚಾಲನೆ (2012 ರ ಕಾಯಿದೆಗೆ ಮರು ಚಾಲನೆ )

Advertisement

Udayavani is now on Telegram. Click here to join our channel and stay updated with the latest news.

Next